ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್ : ಹೀನಾಯ ಸೋಲಿನಿಂದ ಕಂಗೆಟ್ಟ ದೋಸ್ತಿಗಳು ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಹೊಸ ಪ್ಲಾನ್ ಮಾಡಿದ್ದಾರೆ.
ಎಲ್ಲದಕ್ಕೂ ಅವರವರೇ ಜವಾಬ್ಧಾರರು..!
ಜೆಡಿಎಸ್ ಹಾಗೂ ಕಾಂಗ್ರೆಸ್ ಸಚಿವರು ಅವರವರ ಖಾತೆಗಳನ್ನು ಅವರವರೇ ನಿಭಾಯಿಸಬೇಕು. ಬೇರೆ ಯಾರೂ ಅದಕ್ಕೆ ಮೂಗು ತೂರಿಸಬಾರದು. ಒಂದು ವೇಳೆ ಶಾಸಕರು ಅಸಮಾಧಾನ ಹೊರಹಾಕಿದ್ರೆ ಅಥವಾ ಸರ್ಕಾರ ಡ್ಯಾಮೇಜ್ ಆಗುವಂತಹ ಹೇಳಿಕೆ ನೀಡಿದ್ರೆ ಅದಕ್ಕೆ ಆಯಾ ಪಕ್ಷದವರೇ ಕಡಿವಾಣ ಹಾಕಬೇಕು. ಜೆಡಿಎಸ್ನಲ್ಲಿ ಏನೇ ಸಮಸ್ಯೆ ಬಂದರೂ ಅದಕ್ಕೆ ಅವರೇ ಜವಾಬ್ಧಾರರು. ಹಾಗೇ ಕಾಂಗ್ರೆಸ್ ನಲ್ಲಿ ಸಮಸ್ಯೆ ಬಂದರೇ ಅದಕ್ಕೆ ಕಾಂಗ್ರೆಸ್ ನಾಯಕರೇ ಹೊಣೆಗಾರರು. ಎಲ್ಲರೂ ತಮ್ಮ ತಮ್ಮ ಜವಾಬ್ಧಾರಿಗಳನ್ನು ಅರಿತುಕೊಂಡು ಹೋಗೋದರ ತೀರ್ಮಾನಕ್ಕೆ ಬರಲಾಗಿದೆ.
‘ಹೆಚ್ಡಿಕೆ’ ಕರೆದ್ರೂ ಬಾರದ ‘ಸಿದ್ದು’..!
ಇನ್ನು ಸಿಎಂ ಕುಮಾರಸ್ವಾಮಿ ಕರೆದ ಅನೌಪಚಾರಿಕ ಸಂಪುಟ ಸಭೆಗೆ ಸಿದ್ದರಾಮಯ್ಯ ಬಂದಿಲ್ಲ. ಖುದ್ದಾಗಿ ಸಿಎಂ ಕುಮಾರಸ್ವಾಮಿ ಆಹ್ವಾನಿದ್ರೂ ಬಂದಿಲ್ಲ. ಮೀಟಿಂಗ್ ಮಧ್ಯೆ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯಗೆ ಫೋನ್ ಮಾಡಿದಾಗ, ಸಿದ್ದರಾಮಯ್ಯ’ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲವನ್ನು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದೇನೆ. ನನ್ನ ಬದಲಾಗಿ ಪರಮೇಶ್ವರ್, ದಿನೇಶ್ ಗುಂಡೂರಾವ್ ಬರುತ್ತಾರೆ. ಅಸಮಾಧಾನ ಇರುವರೆಗೂ ಸಂದೇಶ ರವಾನಿಸಿರೋದಾಗಿ ತಿಳಿಸಿದ್ದಾರೆ.
ಜೂನ್ 10 ಕ್ಕೆ ಶಾಸಕಾಂಗ ಸಂಪುಟ ಸಭೆ
ಜೂನ್ 10 ಕ್ಕೆ ದೋಸ್ತಿ ಸರ್ಕಾರ ಶಾಸಕಾಂಗ ಸಂಪುಟ ಕರೆದಿದ್ದು, ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.