ದಿಶಾ ಅತ್ಯಾಚಾರ ಪ್ರಕರಣ: ಆರೋಪಿಗಳ ಎನ್​ಕೌಂಟರ್​

ದಿಶಾ ಅತ್ಯಾಚಾರ ಪ್ರಕರಣ: ಆರೋಪಿಗಳ ಎನ್​ಕೌಂಟರ್​

ಹೈದರಾಬಾದ್, ಡಿ. 06: ಕಳೆದ ವಾರ ತೆಲಂಗಾಣದಲ್ಲಿ ನಾಲ್ವರು ಲಾರಿ ಚಾಲಕರು ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಆಕೆಯನ್ನು ಜೀವಂತ ಸುಟ್ಟು ಕೊಲೆ ಮಾಡಿದ್ದರು. ಈ ಘಟನೆ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರು ಹಾಗೂ ಮಹಿಳಾ ಪರ ಸಂಘಟನೆಗಳು ಮತ್ತೊಮ್ಮೆ ಬೀದಿಗಿಳಿದು ಅತ್ಯಾಚಾರಿಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಅಲ್ಲದೆ, ಇಂತಹ ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದರು.

ತೆಲಂಗಾಣ ಪಶುವೈದ್ಯೆ ದಿಶಾ ಅತ್ಯಾಚಾರ ಮಾಡಿ ಕೊಲೆಗೈದ ಕಿರಾತಕರಿಗೆ ಪಾಪಪ್ರಜ್ಞೆ ಅನ್ನೋದೇ ಇರಲಿಲ್ಲವೇನೋ. ಅತ್ಯಾಚಾರದ ನಂತರ ದಿಶಾರನ್ನ ಹತ್ಯೆ ಮಾಡಿದ್ದ ಕಾಮುಕರು, ಸಿಕ್ಕಿಬೀಳದಂತೆ ತಪ್ಪಿಸಿಕೊಳ್ಳಲು ಮಾಡಿದ ತಂತ್ರಗಳು ಒಂದೆರಡಲ್ಲ. ವೈದ್ಯೆಯ ಮೃತದೇಹಕ್ಕೆ ಬೆಂಕಿ ಇಟ್ರು, ಆಕೆಯ ಸ್ಕೂಟರ್ ತೆಗೆದುಕೊಂಡು ಹೋಗಿ ಬೇರೆಲ್ಲೋ ಎಸೆದು ಬಂದ್ರು. ಕೊನೆಗೆ ಪೊಲೀಸರಿಂದ ಅರೆಸ್ಟ್ ಆದ ನಂತರವೂ ತಪ್ಪಿಸಿಕೊಳ್ಳಲು ಯತ್ನಿಸಿ ಈಗ ಹೆಣವಾಗಿದ್ದಾರೆ.

ತೆಲಂಗಾಣ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಲ್ಲಾ 4 ಜನ ಆರೋಪಿಗಳನ್ನು ಹೊಡೆದುರುಳಿಸಿರುವುದು ಸೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್. ಕಾಮುಕರನ್ನು ಹೊಡೆದುರುಳಿಸಿರುವ ಅಧಿಕಾರಿ ನಮ್ಮದೇ ನಾಡಿನ ಕನ್ನಡಿಗ ಎಂಬುದು ಇದೀಗ ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಚಾರವಾಗಿ ಬದಲಾಗಿದೆ. ಆದರೆ, ಕನ್ನಡಿಗರಿಗೆ ತಿಳಿಯದ ಮತ್ತೊಂದು ವಿಚಾರ ಎಂದರೆ ವಾರಂಗಲ್ನ ಆಸಿಡ್ ಆರೋಪಿಗಳನ್ನು ಎನ್ಕೌಂಟರ್ ಮಾಡಿದ್ದು ಸಹ ಇದೇ ವಿಶ್ವನಾಥ್ ಸಜ್ಜನರ್ ಎಂಬ ಖಡಕ್ ಪೊಲೀಸ್ ಅಧಿಕಾರಿ.

ಹೌದು. ದಿಶಾ ಕೇಸ್ ತನಿಖೆ ನಡೆಸುತ್ತಿದ್ದ ಪೊಲೀಸರು ಪ್ರಕರಣದ ಮರುಸೃಷ್ಠಿ ನಡೆಸಬೇಕಿತ್ತು. ಈ ಹಿನ್ನೆಲೆ ನಾಲ್ವರು ಆರೋಪಿಗಳಾದ ಆರಿಫ್, ಶಿವ, ಚೆನ್ನಕೇಶವಲು ಹಾಗೂ ನವೀನ್ನನ್ನು ಇಂದು ನಸುಕಿನ ಜಾವ 3.30ಕ್ಕೆ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ ಆರೋಪಿಗಳು ಎಸ್ಕೇಪ್ ಆಗಲು ಯತ್ನಿಸಿ, ಪೊಲೀಸರ ಗನ್ ಕಿತ್ತುಕೊಂಡು ಫೈರ್ ಮಾಡಿದ್ದಾಗಿ ಶಂಷಾಬಾದ್ ಡಿಸಿಪಿ ಪ್ರಕಾಶ್ ರೆಡ್ಡಿ ಹೇಳಿದ್ದಾರೆ.

ನಾವು ಘಟನೆಯ ಮರುಸೃಷ್ಟಿ ಮಾಡುವಾಗ ಆರೋಪಿಗಳಲ್ಲಿ ಒಬ್ಬ ಪೊಲೀಸ್ ಗನ್ ಕಿತ್ತುಕೊಂಡು ಫೈರ್ ಮಾಡಿದ. ಹೀಗಾಗಿ ನಾವು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿ, ನಾಲ್ವರನ್ನೂ ಕೊಲ್ಲಬೇಕಾಯ್ತು ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos