ಪೀಣ್ಯ,ದಾಸರಹಳ್ಳಿ, ಆ. 15: ಪೀಣ್ಯ ದಾಸರಹಳ್ಳಿ ಸಮೀಪ ಭುವನೇಶ್ವರಿ ನಗರದಲ್ಲಿ 73 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ಸಹೋದರಿಯರಿಂದ ಸಹೋದರರಿಗೆ ರಾಖಿ ಕಟ್ಟುವುದರ ಮುಖಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡು ಟ್ರಸ್ಟ್ ರಾಜ್ಯಾಧ್ಯಕ್ಷ ಹನುಮಂತಪ್ಪ ಎಸ್ ಮೇಡೆಗಾರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಆರ್. ನದಾಫ್ ಪದಾಧಿಕಾರಿಗಳಾದ ಶರಣಯ್ಯ ಜೆಡಿಮಠ, ಅಂಬಣ್ಣ ಮುಡುಬಿ, ಸುರೇಶ್ ಬಿರಾದಾರ್, ಎಂ.ಎಸ್.ಚೌಧರಿ ಮಹಿಳಾ ಘಟಕದ ಪದಾಧಿಕಾರಿಗಳಾದ ಶಿಲ್ಪಾ ಮೇಡೆಗಾರ, ಶಾರದಾ ಸಾಲಿಮಠ, ಸುನಂದಾ ಹಿರೇಮಠ, ಬಿ ಜಿ ಗಿರಿಜಮ್ಮ ಹಾಗೂ ಟ್ರಸ್ಟ್ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.