‘ಬಳ್ಳಾರಿ’ ಜನತೆಗೆ ದೇವೇಂದ್ರಪ್ಪ ಕೃತಜ್ಞತೆ..!

‘ಬಳ್ಳಾರಿ’ ಜನತೆಗೆ ದೇವೇಂದ್ರಪ್ಪ ಕೃತಜ್ಞತೆ..!

ಬಳ್ಳಾರಿ, ಮೇ. 23, ನ್ಯೂಸ್‍ ಎಕ್ಸ್ ಪ್ರೆಸ್‍: ಬಳ್ಳಾರಿಯಲ್ಲಿ ಉಗ್ರಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಗೆಲುವಿನ ನಗೆ ಬೀರಿದ್ದಾರೆ. ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ದೇವೇಂದ್ರಪ್ಪ ಧನ್ಯವಾದ ತಿಳಿಸಿದ್ದಾರೆ. ಜಿಲ್ಲೆಯ ಕಾರ್ಯಕರ್ತರು, ನಾಯಕರ ಶ್ರಮದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ.  ರೈತನ ಮಗ, ಜಿಲ್ಲೆಯ ಮಗನನ್ನು ಸಂಸತ್ ಪ್ರವೇಶಿಸಲು ಅವಕಾಶ ಮಾಡಿದ ಜನತೆಗೆ ಧನ್ಯವಾದಗಳು. ಶಾಸಕರಾದ ಶ್ರೀರಾಮುಲು, ಎನ್.ವೈ.ಗೋಪಾಲಕೃಷ್ಣ, ಸೋಮಶೇಖರ್ ರೆಡ್ಡಿ ಸೇರಿ ಅನೇಕ ಮುಖಂಡರು ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ದೇವೆಂದ್ರಪ್ಪ ಹೇಳಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿ ನೀರಿನ ತೊಂದರೆ ಉಂಟಾಗಿದೆ. ಮೊದಲ ಆದ್ಯತೆ ಕೆರೆ ತುಂಬಿಸುವ ಮೂಲಕ ಕುಡಿವ ನೀರು ಒದಗಿಸಲಾಗುವುದು. ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕರಿಸಲಿದ್ದು, ಅವರ ಕೈ ಹಿಡಿದು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗುವುದು ಎಂದರು.

ಸೋಲು ಒಪ್ಪಿಕೊಂಡ ‘ಉಗ್ರಪ್ಪ’
ರಾಜ್ಯದಲ್ಲಿ ಮೋದಿ ಅಲೆ ಕೆಲಸ ಮಾಡಿದೆ, ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ ಎಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಸೋಲನ್ನುಂಡಿರುವ ಕೈ ಅಭ್ಯರ್ಥಿ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದಿದ್ದ ಉಗ್ರಪ್ಪ
2014ರಲ್ಲಿ ಬಿಜೆಪಿಯ ಶ್ರೀರಾಮುಲು , ಕಾಂಗ್ರೆಸ್‌ನ ಎನ್ ವೈ ಹನುಮಂತಪ್ಪ ಅವರನ್ನು 85, 144 ಮತಗಳ ಅಂತರದಿಂದ ಸೋಲಿಸಿದ್ದರು. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀರಾಮುಲು ರಾಜೀನಾಮೆ ನೀಡಿದ್ದರಿಂದ 2018ರಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಉಗ್ರಪ್ಪ ಗೆಲುವು ಸಾಧಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos