ಶವವಾಗಿ ಪತ್ತೆ: ಪ್ರೇಯಸಿ ಕುಟುಂಬಸ್ಥರ ಕೈವಾಡ?

ಶವವಾಗಿ ಪತ್ತೆ: ಪ್ರೇಯಸಿ ಕುಟುಂಬಸ್ಥರ ಕೈವಾಡ?

ಬೆಂಗಳೂರು: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಬುಧವಾರ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ರಹೀಂ ಮೃತ ದುರ್ದೈವಿ. ರಹೀಂ ಬೆಂಗಳೂರು ಹೊರವಲಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಜಿ ಸೊಣ್ಣೇನಹಳ್ಳಿ ನಿವಾಸಿಯಾಗಿದ್ದು, ಕಳೆದ 7ರಂದು ಅಂದರೆ ಸೋಮವಾರ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ ಎಂದು ತಾಯಿಗೆ ಹೇಳಿ ಹೋಗಿದ್ದಾನೆ. ಆದರೆ ಯುವಕ ಎರಡು ದಿನಗಳ ನಂತರ ಬೆಂಗಳೂರಿನ ಗ್ರಾಮಂತರ ಹೊಸಕೋಟೆ ಅಮಾನಿ ದೊಡ್ಡಕೆರೆ ದಡದ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಮೃತ ರಹೀಂ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಕೆಲವು ದಿನಗಳ ಹಿಂದೆಯಷ್ಟೇ ಹುಡುಗಿಯ ಪೋಷಕರು ಹಾಗೂ ಸಂಬಂಧಿಕರಿಗೆ ಇವರಿಬ್ಬರ ಪ್ರೀತಿಯ ವಿಚಾರ ತಿಳಿದಿದೆ. ನಂತರ ಯುವತಿಯ ಮನೆಯವರು ನಮ್ಮ ಹುಡುಗಿಯನ್ನು ಭೇಟಿಯಾಗಬಾರದು, ಮಾತನಾಡಿಸಬಾದರೆಂದು ಬೆದರಿಕೆ ಹಾಕಿದ್ದರು ಎಂದು ತಿಳಿದು ಬಂದಿದೆ.

ಯುವತಿಗೆ ಅವರ ಪೋಷಕರು ಬೇರೊಬ್ಬ ಯುವಕನ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಇದರಿಂದ ರಹೀಂ ಸಾಕಷ್ಟು ಮನನೊಂದಿದ್ದನು. ಕೊನೆಗೆ ಯುವತಿಯನ್ನು ಬಿಟ್ಟಿರಲಾರದೇ ರಹೀಂ ಪದೇ ಪದೇ ಆಕೆಗೆ ಫೋನ್ ಮಾಡಿ ಭೇಟಿಯಾಗಲು ಪ್ರಯತ್ನಿಸುತ್ತಿದ್ದನು. ಇದರಿಂದ ಯುವತಿಯ ಸಂಬಂಧಿಕರೇ ನನ್ನ ಮಗನನ್ನು ಕೊಲೆ ಮಾಡಿಸಿದ್ದಾರೆ ಎಂದು ರಹೀಂ ಪೋಷಕರು ಆರೋಪ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos