ರಾಜ್ಯ ಬರಗಾಲದ ಸ್ಥಿತಿಯಲ್ಲಿದೆ, ನಮಗೆ ಬರಬೇಕಾದ ಹಣ ಕೊಡಿ: ಡಿಸಿಎಂ

ರಾಜ್ಯ ಬರಗಾಲದ ಸ್ಥಿತಿಯಲ್ಲಿದೆ, ನಮಗೆ ಬರಬೇಕಾದ ಹಣ ಕೊಡಿ: ಡಿಸಿಎಂ

ನವದೆಹಲಿ: ಕೇಂದ್ರ ಸರ್ಕಾರದಿಂದ ಬಜೆಟ್ ಬಿಡುಗಡೆಯಲ್ಲಿ ರಾಜ್ಯಕ್ಕೆ ಅನುದಾನದ ಅನ್ಯಾಯವಾಗಿದೆ ಎಂದು ಇಂದು ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್ ನಲ್ಲಿ ಇಂದು ಪ್ರತಿಭಟನೆ ಶುರುವಾಗಿದೆ.

ರಾಜ್ಯ ಇಂದೂ ಭೀಕರ ಬರಬಾರದ ಪರಿಸ್ಥಿತಿಯಲ್ಲಿದೆ, ಇಂತಹ ಸ್ಥಿತಿಯನ್ನು ಕೇಂದ್ರ ಸರ್ಕಾರ ಅನುದಾನ ಹಣ ಬಿಡುಗಡೆ ಮಾಡದೇ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದೆ, ಈ ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತಲೇಬೇಕು ನಾವು ಇಡೀ ರಾಜ್ಯದ ಜನತೆಯ ಪರವಾಗಿ ಇಂದು ಹೋರಾಟ ಮಾಡುತ್ತಿದ್ದೇವೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದಲ್ಲಿ ಕೂಡಲೇ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ನಾವು ನಿರ್ಮಾಪಕರು ಅಲ್ಲ, ವಿತರಕರು ಅಲ್ಲ, ನಾಟಕ ಮಾಡಲು ಇಲ್ಲಿಗೆ ಬಂದಿಲ್ಲ ಬಿಜೆಪಿಯವರು ಜನರ ಭಾವನೆಗಳ ಮೇಲೆ ದೇಶ ಕೊಂಡೊಯ್ಯುತ್ತಿದ್ದಾರೆ, ನಾವು ಜನರ ಬದುಕಿನ ಮೇಲೆ ಕೊಂಡೊಯ್ಯುತ್ತಿದ್ದೇವೆ ನಮಗೆ ಕೇಂದ್ರದಿಂದ ಬರಬೇಕಾದ ಹಣ ಕೊಡಲಿ ತೆರಿಗೆ ಹಣ ಬಿಡುಗಡೆ ಮಾಡಲಿ ಎಂದು ಅಗ್ರಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos