ನಾನು ಏನು ಮೂರ್ಖ‌ನಲ್ಲ: ಡಿಸಿಎಂ

ನಾನು ಏನು ಮೂರ್ಖ‌ನಲ್ಲ: ಡಿಸಿಎಂ

ಬೆಂಗಳೂರು: ಲೋಕಸಭಾ ಚುನಾವಣೆ ರಾಜ್ಯದಲ್ಲಿ ಬಿಸಿ ಹೆಚ್ಚಾಗಿದ್ದು ದಿನದಿಂದ ದಿನಕ್ಕೆ ಅಭ್ಯರ್ಥಿಗಳು ಭರ್ಜರಿ ಮತಯಾಚನೆ ಮಾಡುತ್ತಿದ್ದಾರೆ.  ದೇವೇಗೌಡರು ಹಾಗೂ ಡಿಕೆ ಶಿವಕುಮಾರ್ ಅವರ ಜಗಳ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ.

ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಜಮೀನನ್ನು ಬರೆಸಿಕೊಂಡರು ಎಂಬ ಆರೋಪ ಅದೊಂದು ಚಿಲ್ಲರೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ತಪ್ಪು ಮಾಡಿದ್ರೆ ನಾನು ಯಾವುದೇ ಶಿಕ್ಷೆಗೂ ರೆಡಿ ಇದ್ದೇನೆ, ನಾನು ಏನು ಮೂರ್ಖ‌ನಲ್ಲ ಚಿಲ್ಲರೇ ಸ್ಟೇಟ್ ಮೆಂಟ್ ಗೆ ನಾನು ರಿಯಾಕ್ಟ್ ಮಾಡಲ್ಲ. ಅದರ ಬಗ್ಗೆ ಚರ್ಚೆ ಮಾಡೋಣ, ಬರಲಿ ಬಹಿರಂಗ ವೇಧಿಕೆಯಲ್ಲೇ ಮಾತಾಡೋಣ ಎಂದು ಆಹ್ವಾನ ಕೊಟ್ಟಿದ್ದಾರೆ ಡಿಕೆಶಿ.

ಒಟ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲೇ ಬೇಕು ಅಂತ ಜಿದ್ದಿಗೆ ಬಿದ್ದಿರುವ ಕುಮಾರಸ್ವಾಮಿ, ದೊಡ್ಡಗೌಡ್ರು 28 ವರ್ಷಗಳ ಕೇಸನ್ನು ಕೆಣಕಿ ಅದಕ್ಕೆ ಮರುಜೀವ ಕೊಡ್ತಿದ್ದಾರೆ. ಆ ಕೇಸನ್ನ ಡಿಕೆಶಿ ಚಿಲ್ಲರೆ ಅಂತ ತಳ್ಳಿಹಾಕಿದ್ದು ದಾಖಲೆ ಇದ್ರೆ ಚರ್ಚೆ ಬನ್ನಿ ಅಂದಿದ್ದಾರೆ. ಡಿಕೆಶಿ ಕೇಳಿದ ದಾಖಲೆಯನ್ನ ದೊಡ್ಡಗೌಡ್ರು ಕೊಟ್ಟು ಕಹಾನಿಗೆ ಟ್ವಿಸ್ಟ್ ಕೊಡ್ತಾರಾ ಎಂಬುದನ್ನು ಕಾದುನೋಡಬೇಕಿದೆ..

 

ಫ್ರೆಶ್ ನ್ಯೂಸ್

Latest Posts

Featured Videos