ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಬೃಹತ್ ವೇದಿಕೆ ಸಿದ್ಧವಾಗಿದೆ. ಜಾತಿ ಜನಗಣತಿ ವಿಷಯವಾಗಿ ಬಹಳಷ್ಟು ಚರ್ಚೆಯಾಗಿದ್ದು. ಇದರ ನಡುವೆ ವೀರಶೈವ ಲಿಂಗಾಯತರ ಶಕ್ತಿ ಪ್ರದರ್ಶನಕ್ಕೆ ಬೆಣ್ಣೆ ನಗರಿ ಸಜ್ಜು ಡಿಸೆಂಬರ್ 23, 24ರಂದು ಎಂಬಿಎ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ವೀರಶೈವ ಲಿಂಗಾಯತ ಮಹಾಸಭಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಪಕ್ಷಾತೀತವಾಗಿ ಲಿಂಗಾಯತ ಶಾಸಕರು ಸಚಿವರು ಇಲ್ಲಿ ಭಾಗಿಯಾಗಿರುತ್ತಾರೆ. ಮೊನ್ನೆಯಷ್ಟೇ ಶಾಮನೂರು ಶ್ರೀ ಶಂಕರ ಅವರ ನೇತೃತ್ವದಲ್ಲಿ ಲಿಂಗಾಯತ ಶಾಸಕರು ಸಚಿವರು ಸಹಿ ಮಾಡಿ ಜಾತಿ ಜನಗಣತಿ ವಿರುದ್ಧವಾಗಿ ಆ ಪತ್ರವನ್ನು ಸಿಎಂ ಗೆ ತಲುಪಿಸಲಾಗಿತ್ತು. ಇದರ ಬೆನ್ನೆಲ್ಲೇ ಬೆಣ್ಣೆ ನಗರಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ದೊಡ್ಡ ವೇದಿಕೆ ಸಿದ್ಧಗೊಂಡಿದೆ. ಮಹಾ ಅಧಿವೇಶನ ಎಂದು ಕರೆಯಲಾಗುತ್ತಿದೆ ಪಕ್ಷಾತೀತವಾಗಿ ಶಾಸಕರು ಸಚಿವರು ಭಾಗಿಯಾಗಲಿದ್ದಾರೆ.