ದಸರಾದಲ್ಲಿ ಯಾವುದೇ ಆತಂಕ ಇಲ್ಲ

ದಸರಾದಲ್ಲಿ ಯಾವುದೇ ಆತಂಕ ಇಲ್ಲ

ಮೈಸೂರು, ಸೆ. 25: ದಸರಾದಲ್ಲಿ ಯಾವುದೇ ಆತಂಕ ಇಲ್ಲ. ಪ್ರವಾಸಿಗರು ನೆಮ್ಮದಿಯಾಗಿ ದಸರಾ ಉತ್ಸವ ವೀಕ್ಷಿಸಲು ಬಿಗಿ ಭದ್ರತೆ ಒದಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಉದ್ಭವಿಸುವುದಿಲ್ಲ.
ಶಾಂತಿಯುತ ಹಾಗೂ ಸುರಕ್ಷಿತವಾಗಿ ದಸರಾ ನಡೆಯಲಿದೆ. ಪ್ರವಾಸಿಗರು ಯಾವುದೇ ಅಂಜಿಕೆ ಇಲ್ಲದೆ ದಸರಾದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕೆಂದು ಮನವಿ ಮಾಡಿದರು.ದಸರಾ ಪ್ರಯುಕ್ತ ಎರಡು ಹಂತಗಳಲ್ಲಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ. ಸೆ.29ರಿಂದ ಅ.5ರವರೆಗೆ ಹಾಗೂ ಅ.6ರಿಂದ ಅ.8ರವರೆಗೆ ಎರಡು ಹಂತದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos