ದಳಪತಿಗಳ ವಿರುದ್ಧ ಶಾಸಕ ನಾಗರಾಜ ಗುಡುಗು

ದಳಪತಿಗಳ ವಿರುದ್ಧ ಶಾಸಕ ನಾಗರಾಜ ಗುಡುಗು

ಬೆಂಗಳೂರು, ಜುಲೈ 10 : ರಾಜಕೀಯ ಅಸ್ಥಿರತೆ, ಬಿಕ್ಕಟ್ಟಿಗೆ, ಶಾಸಕರ ಅಸಮಾಧಾನಕ್ಕೆ ಕುಮಾರಸ್ವಾಮಿ ಹಾಗೂ ಎಚ್ ಡಿ ರೇವಣ್ಣ ಇಷ್ಟೆಲ್ಲ ನಾಟಕಕ್ಕೆ ಕಾರಣ ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.
ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ‘’ನಾನು ಶಾಸಕಾಂಗ ಸಭೆಗೆ ಹೋಗಿಲ್ಲ ಎಂದ ಮಾತ್ರಕ್ಕೆ ರಾಜೀನಾಮೆ ಎಂದು ಹೇಳಿದ್ದೀನಾ? ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು. ರಾಜಕೀಯ ಹೈಡ್ರಾಮಾ ಕುತೂಹಲ ತಿರುವು ಪಡೆದುಕೊಳ್ಳುವ ಲಕ್ಷಣ ತೋರಿಸುತ್ತಿದೆ. ರಾಜಕೀಯದ ಬೆಳವಣಿಗೆಗಳು ಸಿನಿಮೀಯ ರೀತಿ ಸಾಗುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos