ಚಾಮುಂಡಿ ಬೆಟ್ಟದಲ್ಲಿ ಮಾರಾಮಾರಿ

ಚಾಮುಂಡಿ ಬೆಟ್ಟದಲ್ಲಿ ಮಾರಾಮಾರಿ

ಮೈಸೂರು, ಸೆ. 30 : ಮೈಸೂರು ದಸರಾಗೆ ಸಾಹಿತಿ ಎಲ್​ಎಲ್ ಭೈರಪ್ಪ​ ವಿದ್ಯುಕ್ತ ಚಾಲನೆ ನೀಡಿದರು. ಮೈಸೂರಿನಲ್ಲಿ 9 ದಿನಗಳ ಕಾಲ ದಸರಾ ಕಳೆ ಕಟ್ಟಲಿದೆ. ಈ ಮಧ್ಯೆ ನಗರದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ.  ಕ್ಷುಲಕ ಕಾರಣಕ್ಕೆ ತಾಯಿ ಚಾಮುಂಡೇಶ್ವರಿ ದೇವಿಯು ಪುಣ್ಯ ಕ್ಷೇತ್ರದ ಚಾಮುಂಡಿ ಬೆಟ್ಟದಲ್ಲಿ ಯುವಕರು ಮಾರಾಮಾರಿ ನಡೆಸಿರುವ ಘಟನೆ ನಡೆದಿದೆ.
ದಸರಾ ಉದ್ಘಾಟನಾ ಹಿನ್ನಲೆ ಎರಡು ಯುವಕರ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಯುವಕರ ಪುಂಡಾಟ ಜೋರಾಗಿತ್ತು. ಕುಡಿದ ಮತ್ತಿನಲ್ಲಿದ್ದ ಸುಮಾರು 10 ಮಂದಿ ಯುವಕರು ಗಲಾಟೆ ಮಾಡಿದ್ದಾರೆ. ರಸ್ತೆಯಲ್ಲೇ ಸಾರ್ವಜನಿಕರ ಮುಂದೆಯೇ ಇಬ್ಬರು ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ. ಗಲಾಟೆ ವೇಳೆ ಯುವಕರು ದ್ವಿಚಕ್ರ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಮಾರಾಮಾರಿ ನೋಡಿ ಹೆದರಿದ ಸಾರ್ವಜನಿಕರು ಅಸಹಾಯಕರಾಗಿ ನಿಂತಿದ್ದಾರೆ. ಸ್ಥಳಕ್ಕೆ ಬಂದ ಕೆ.ಆರ್. ಠಾಣೆಯ ಪೋಲಿಸರು ಗಲಾಟೆ ನಡೆಸಿದ ಕೆಲ ಯುವಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos