ಪತ್ರಕರ್ತೆ ಕಿರುಕುಳ ನೀಡಿದ 4 ಜನರ ಬಂಧನ

ಪತ್ರಕರ್ತೆ ಕಿರುಕುಳ ನೀಡಿದ 4 ಜನರ ಬಂಧನ

ನವದೆಹಲಿ, ಮಾ. 21, ನ್ಯೂಸ್ ಎಕ್ಸ್ ಪ್ರೆಸ್: ಪತ್ರಕರ್ತೆಯಾದ  ಬರ್ಖಾ ದತ್ ಅವರಿಗೆ ಸೋಶಿಯಲ್ ಮೀಡಿಯಾ ಹಾಗೂ ಮೆಸೇಜ್ ಮೂಲಕ ಕಿರುಕುಳ ಹಾಗೂ ಟ್ರೋಲ್ ಮಾಡಿರುವ 4 ಜನ ಆರೋಗಳನ್ನು ನವದೆಹಲಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅನಾಮಿಕರಿಂದ ತನಗೆ ಜೀವ ಬೆದರಿಕೆ ಕರೆಗಳು, ಮೆಸೇಜ್ ಗಳು ಸೇರಿದಂತೆ ಅಶ್ಲೀಲ ಸಂದೇಶಗಳು ಬರುತ್ತಿವೆ ಎಂದು ಬರ್ಖಾ ದತ್ ಅವರು ಫೆ. 21 ರಂದು ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ‘ಟೆಕ್ನಿಕಲ್ ಸರ್ವಿಲೆನ್ಸ್ ಬಳಸಿ 4 ಜನರನ್ನು ಬಂಧಿಸಲಾಗಿದೆ.

ದೆಹಲಿಯಿಂದ ರಾಜೀವ್ ಶರ್ಮಾ (23), ಹೇಮರಾಜ್ ಕುಮಾರ್ (31) ಆದಿತ್ಯ ಕುಮಾರ್ (34) ಹಾಗೂ ಗುಜರಾತ್ ನ ಸೂರತ್ ನಿಂದ ಶಬ್ಬೀರ್ ರ್ಫಾನ್ ಪಿಂಜರಿ (45) ರನ್ನು ಪೋಲೀಸರು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆ ಆರಂಭಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ತಮಗೆ ಬರ್ಖಾ ದತ್ ಮೊಬೈಲ್ ಸಂಖ್ಯೆ ಸೋಶಿಯಲ್ ಮೀಡಿಯಾ ಮೂಲಕ ಲಭಿಸಿತ್ತು ಎಂದು ಬಾಯ್ಬಿಟ್ಟಿದ್ದಾರೆ. ಸದ್ಯ ಪೊಲೀಸರು ದತ್ ರವರ ಖಾಸಗಿ ಮೊಬೈಲ್ ಸಂಖ್ಯೆಯನ್ನು ಲೀಕ್ ಮಾಡಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos