ಮಂಡ್ಯ: ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೋನಾ ಸೋಂಕು. ಮೊದಲು ಮಳವಳ್ಳಿ, ನಾಗಮಂಗಲ ಮಂಡ್ಯ ಸಿಟಿ ಯನ್ನು ಹಳ್ಳಾಡಿಸಿದ್ದ ಸೋಂಕು ನಂತರ ಮುಂಬೈ, ಮಹಾರಾಷ್ಟ್ರ ನಂಜು ಕೆಆರ್ಪೇಟೆ ಪಾಂಡವಪುರಯನ್ನು ಆದರಿಸಿದ್ದೆವು. ಇದೀಗ ಪತ್ತೆ ಹಚ್ಚದಿರುವ ಹಾಗೆ ಜಿಲ್ಲೆಯನ್ನೇ ಆವರಿಸಿದೆ. ಈ ಮಹಾಮಾರಿ ಕೊರೋನಾ ಹಟ್ಟಹಾಸವನ್ನು ಮುಂದುವರಿಸಿದ್ದು ಮದ್ದೂರಿಗೂ ಕಾಲಿಟ್ಟಿದೆ.
ಮದ್ದೂ ರು ಪೊಲೀಸ್ ಪೇದೆಗೆ ವಕ್ಕರಿಸಿದ ಕೊರೊನಾ. ಮದ್ದೂರು ಠಾಣೆ ಸೀಲ್ಡೌನ್ಗೆ ಚಿಂತನೆ. ಸಂಪರ್ಕಕ್ಕೆ ಬಂದ ನ್ಯಾಯಾಧೀಶರಿಗೂ ಕ್ವಾರೆಂಟೈನ್ ಸಾಧ್ಯತೆ?. ಪಟ್ಟಣದ ಜನರಲ್ಲಿ ಶುರುವಾದ ಆತಂಕ. ಮಂಡ್ಯ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಅಟ್ಟ ಹಾಸ ಮೆರೆಯಲು ಮುಂದಾಗಿದೆ.
ಗುರುವಾರ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತವಾಗಲಿವೆ. ಪಟ್ಟಣದ ಟ್ರಾಫಿಕ್ ಠಾಣೆಯ ಪೊಲೀಸ್ ಪೇದೆ ಸೇರಿ ೮ ಜನರಿಗೆ ಮದ್ದೂರು ತಾಲೂಕಿನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯ ಪೇದೆಗೆ ಸೋಂಕು ಹರಡಿದ್ದು, ಸಂಚಾರಿ ಮತ್ತು ಟೌನ್ ಪೊಲೀಸ್ ಠಾಣೆಯನ್ನು ಇದೀಗ ಸೀಲ್ಡೌನ್ ಮಾಡಲು ಚಿಂತನೆ ನಡೆಸಲಾಗ್ತಿದೆ. ಪೊಲೀಸ್ ಪೇದೆಗೆ ಸೋಂಕಿನ ಸುದ್ದಿ ತಿಳಿದು ಸ್ಥಳಕ್ಕೆ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದು , ಠಾಣೆಯನ್ನು ಸೀಲ್ಡೌನ್ ಮಾಡಿ ಬೇರೆಡೆ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದಾರೆ. ನ್ಯಾಯಾಧೀಶರ ಜೊತೆ ಪ್ರಾಥಮಿಕ ಸಂರ್ಕದಲ್ಲಿದ್ದ ಕಾರಣಕ್ಕೆ ಅವರಿಗೂ ೧೪ ದಿನ ಹೋಂ ಕ್ವಾರೆಂಟೈನ್ಗೆ ಸೂಚನೆ ನೀಡಲಾಗಿದೆ.