ಕೊರೋನಾ ಜಾಗೃತಿ ಸಭೆ

ಕೊರೋನಾ ಜಾಗೃತಿ ಸಭೆ

ಮಧುಗಿರಿ: ಜಗತ್ತಿನಲ್ಲಿ ಜನರ ನೆಮ್ಮದಿ ಭಂಗ ತಂದಿರುವ ಕೊರೋನಾ ಸೋಂಕಿನ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಮಧುಗಿರಿ ಟೌನ್ ಎಸ್.ಐ.ಕಾಂತರಾಜು ಎಲ್. ಅಧ್ಯಕ್ಷತೆಯಲ್ಲಿ ಪಟ್ಟಣದ ಸಾರ್ವಜನಿಕರಿಗೆ, ಮಸೀದಿ ಮುಖಂಡರು ಹಾಗು ಅಲ್ಪಸಂಖ್ಯಾತರ ಮುಖಂಡರಿಗೆ ಸಭೆ ಆಯೋಜಿಸಲಾಗಿತ್ತು.
ಎಸ್.ಐ.ಕಾಂತರಾಜು ಎಲ್ ಮಾತನಾಡಿ ಕೊರೋನಾ ವೈರಸ್ ನಿಯಂತ್ರಣದ ಬಗ್ಗೆ ಮತ್ತು ಸಾಧಕ ಬಾಧಕಗಳ ಬಗ್ಗೆ ಸಾರ್ವಜನಿಕರೊಂದಿಗೆ ಮುಕ್ತವಾಗಿ ಚರ್ಚಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ಧೈರ್ಯ ತುಂಬಿದರು.
ಕೊರೋನಾದಿಂದ ಪಾರಾಗಲು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ , ಕೊರೋನಾ ಬಗ್ಗೆ ಅನಾವಶ್ಯಕ ಗಾಬರಿ ಬೇಡ. ಇದೊಂದು ಅಪಾಯಕಾರಿ ವೈರಸ್ ಆದರೂ ಮುಂಜಾಗ್ರತೆ ವಹಿಸಿ ಸ್ವತ್ಛತೆ ಕಾಪಾಡಿಕೊಂಡು ಬಂದಲ್ಲಿ ರೋಗ ನಿಯಂತ್ರಿಸಬಹುದು ಎಂದು ತಿಳಿಸಿದರು.
ಮಸೀದಿ ಮುಖಂಡರುಗಳಾದ ಸನಾವುಲ್ಲಾ, ಇಬ್ರಾಹಿಮ್, ಬಾಬ ಫಕೃದ್ಧಿನ್ ಷರಿಫ್, ನಾಸಿರ್, ಚಾಂದ್ ಪಾಷ ,ಜಮೀರ್ ,ಅಲ್ಪಸಂಖ್ಯಾತರ ಮುಖಂಡರಾದ ಅಬ್ದುಲ್ ಖುದ್ದುಸ್,ಸಲ್ಮಾನ್ ಬೈಗ್,ಹರ್ಷದ್ ಹುಸೇನ್, ಮನ್ನು, ಮುದ್ದು, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರಾದ ಅಧ್ಯಕ್ಷರಾದ ಸಯ್ಯದ್ ಅಲಾವುದ್ದೀನ್ ಹಾಜರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos