ಇಸ್ಲಾಂ ಧರ್ಮದ ಬಗ್ಗೆ ವಿವಾದಾತ್ಮಕ ಪೋಸ್ಟ್: ವ್ಯಕ್ತಿ ಬಂಧನ

ಇಸ್ಲಾಂ ಧರ್ಮದ ಬಗ್ಗೆ ವಿವಾದಾತ್ಮಕ ಪೋಸ್ಟ್: ವ್ಯಕ್ತಿ ಬಂಧನ

ಉಡುಪಿ, ಡಿ. 23: ಕುಂದಾಪುರದ ಯುವಕನೊಬ್ಬ ತನ್ನ ಫೇಸ್ ಬುಕ್ ನಲ್ಲಿ ಇಸ್ಲಾಂ ಧರ್ಮ ಹಾಗೂ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿರುವ ಆರೋಪದಲ್ಲಿ ಸೌದಿಯಲ್ಲಿ ಬಂಧಿಸಲಾಗಿದೆ.

ಕುಂದಾಪುರದ ಮೂಲದ ಹರೀಶ್ ಬಂಗೇರ ಸೌದಿಯ ದಮಾಮ್ ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಫೇಸ್ ಬುಕ್ ನಲ್ಲಿ ಎನ್ ಆರ್ ಸಿ ಮತ್ತು ಸಿಎಎ ಕಾಯ್ದೆಯ ಪರ ಬರೆದು ಪೋಸ್ಟ್ ಮಾಡಿದ್ದನು.

ಬಳಿಕ ಮತ್ತೊಂದು ಅಕೌಂಟ್ ನಲ್ಲಿ ಸೌದಿಯ ದೊರೆಗೆ ಅವಹೇಳನ ಮಾಡಿದ ಫೋಟೋ ಜೊತೆಗೆ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಬರೆದುಕೊಂಡಿದ್ದ ಪೋಸ್ಟ್ ಕೂಡ ಅಪ್ಲೋಡ್ ಆಗಿದ್ದು, ಹೀಗಾಗಿ ಹರೀಶ್ ನನ್ನು ಸೌದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos