ನವದೆಹಲಿ , ಆ .21 : ಚಿದಂಬರಂ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಹಿನ್ನೆಲೆ ನಿವಾಸಕ್ಕೆ ಧಾವಿಸಿದ್ದ 6 ಅಧಿಕಾರಿಗಳಿದ್ದ ಸಿಬಿಐ ತಂಡ ಮನೆಯ ಹೊರಗೆ ನೋಟಿಸ್ ಹಚ್ಚಿ, ಎರಡು ಗಂಟೆಯೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಸಿಬಿಐ ತಂಡ ನಿರ್ಗಮಿಸಿದ ಕೆಲವೇ ಗಂಟೆಗಳ ಬಳಿಕ ಜಾರಿ ನಿರ್ದೇಶನಾಲಯದ ತಂಡ ಕೂಡ ಚಿದಂಬರಂ ಮನೆಗೆ ಭೇಟಿ ಕೊಟ್ಟಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಅವಧಿಯಲ್ಲಿ ಚಿದಂಬರಂ ಮೀಡಿಯಾ ಕಂಪೆನಿಗೆ ವಿದೇಶಿ ಬಂಡವಾಳ ಹರಿದುಬರಲು ವ್ಯವಸ್ಥೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕಾಗಿ ಚಿದಂಬರಂ ಪುತ್ರ ಕಾರ್ತಿ, ಕಿಕ್ ಬ್ಯಾಕ್ ಪಡೆದ ಆರೋಪವಿದೆ.
ಮಂಗಳವಾರ ದಿಲ್ಲಿ ಹೈಕೋರ್ಟ್, ನಿರೀಕ್ಷಿತ ಜಾಮೀನಿಗೆ ಆಗ್ರಹಿಸಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.