ಬಿಎಸ್ವೈ ವಿರುದ್ಧ ಎಂಎಲ್ಸಿ ಇದ್ರೆ ಸಾಕು

ಬಿಎಸ್ವೈ ವಿರುದ್ಧ ಎಂಎಲ್ಸಿ ಇದ್ರೆ ಸಾಕು

ಬೆಂಗಳೂರು, ಡಿ. 8 : ಸಿಎಂ ಯಡಿಯೂರಪ್ಪ ಅವರು 13 ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಯಾರು ಹೇಳಿದ್ದು? ಬಿಜೆಪಿವು 15 ಕ್ಷೇತ್ರದಲ್ಲಿವೂ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಿಎಂ ಬಿಎಸ್ವೈಗೆ ಟಾಂಗ್ ನೀಡಿದರು.
ಸದಾಶಿವನಗರದಲ್ಲಿಂದು ಉಪಚುನಾವಣೆಯಲ್ಲಿ 13 ಸೀಟ್ ಗೆಲ್ಲುತ್ತೇವೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್ವೈ 13 ಸೀಟ್ ಗೆದ್ದರೆ, ಕಾಂಗ್ರೆಸ್-ಜೆಡಿಎಸ್ ಇಬ್ಬರಿಗೆ ಮೋಸ ಮಾಡಿದಂತೆ ಆಗುತ್ತದೆ ಅಲ್ವಾ? ಹಾಗಾಗಿ 15 ಗೆಲ್ಲುತ್ತಾರೆ ಎಂದು ಡಿಕೆಶಿ ವ್ಯಂಗ್ಯವಾಡಿದರು.
ತನಾಡಿದ ಡಿಕೆಶಿ, ಕನಕಪುರದಲ್ಲಿ ಕಾಲೇಜು ಸ್ಥಾಪನೆಗೆ ಅವಕಾಶ ಮಾಡಿ ಕೊಡಿ ಎಂದು ಸಿಎಂ ಗೆ ಪತ್ರ ಬರೆದಿದ್ದೇನೆ. ಬಿಎಸ್ವೈ ಈ ವಿಚಾರದಲ್ಲಿ ಸ್ಥಳ ಬದಲಾವಣೆ ಮಾಡಿದ್ದು ಸರಿಯಲ್ಲ ಎಂದು ನುಡಿದರು.
ಅಲ್ಲದೇ, ನಾವು ರಾಜಕಾರಣದಲ್ಲಿ ಇದ್ದವರು ಹೋರಾಟ ಮಾಡುವುದು ನಮಗೆ ಗೊತ್ತಿದೆ. ಹೋರಾಟಕ್ಕೆ ಸಾವಿರಾರು ಜನ ಬೇಕಿಲ್ಲ. ಒಂದಿಬ್ಬರು ಎಂಎಲ್ಸಿ ಇದ್ದರೆ ಅಷ್ಟೇ ಸಾಕು ಎಂದರು. ಇನ್ನು ಡಿಸಿಎಂ ಅಶ್ಚತ್ಥನಾರಾಯಣ್ ರಾಮನಗರವನ್ನು ಕ್ಲೀನ್ ಮಾಡುತ್ತೇವೆ ಎನ್ನುವುದಕ್ಕೆ ಪ್ರತಿಕ್ರಿಯಿಸಿ ಮಾಡಲಿ ಪಾಪ. ಆಲ್ ದ್ ಬೆಸ್ಟ್ ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos