ಬೆಂಗಳೂರು: ರೈತರ ಪ್ರತಿಭಟನೆಯ ಮಧ್ಯೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್ ಗುರುವಾರ ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಖನೌರಿ ಗಡಿ ದಾಟುವಿಕೆಯಲ್ಲಿ ಪ್ರತಿಭಟನೆ ನಿರತ ರೈತನೊಬ್ಬ ಸಾವನಪ್ಪಿದ್ದ ನಂತರ ಫೆಬ್ರವರಿ 23 ರಂದು ರೈತರು ಕರಾಳ ಶುಕ್ರವಾರ ಆಚರಿಸುವುದಾಗಿ ಘೋಷಿಸಿದರು.
ಪಂಜಾಬ್ ನ ಖನೌರಿ ಗಡಿ ದಾಟುವಿಕೆಯಲ್ಲಿ ರೈತನ ಸಾವಿಗೆ ಸಂತಾಪ ಸೂಚಿಸಿ ತಾವು ಕಪ್ಪು ಶುಕ್ರವಾರ ಆಚರಿಸುತ್ತೇವೆ. ನಾವು ನೆನ್ನೆಯೂ ಟ್ಯಾಕ್ಟರ್ ಮೆರವಣಿಗೆ ನಡೆಸಿದ್ದೇವೆ ಎಂದು ಟಿಕಾಯಿತ್ ತಿಳಿಸಿದರು ತಮ್ಮ ಬೇಡಿಕೆಗಳಿಗಾಗಿ ಕೇಂದ್ರವನ್ನು ಒತ್ತಾಯಿಸಲು ಪ್ರತಿಭಟನೆ ನಡೆಸುತ್ತಿರುವ ರೈತರು ಫೆಬ್ರವರಿ 26ರಂದು ಟ್ಯಾಕ್ಟರ್ ಮೆರವಣಿಗೆ ನಡೆಸಲಿದ್ದಾರೆ ಎಂದು ಬಿಕೆಯು ನಾಯಕ ಹೇಳಿದರು.