ಬಾವುಟ್ ಹಾರಿಸೋಕೆ ರೇವಣ್ಣ ರೆಡಿ..!

ಬಾವುಟ್ ಹಾರಿಸೋಕೆ ರೇವಣ್ಣ ರೆಡಿ..!

ಬೆಂಗಳೂರು, ಡಿ. 14 : ಲೋಕಸಭೆ, ಉಪ ಚುನಾವಣೆ ಬಳಿಕ ದೇವೇಗೌಡ್ರು ಸದ್ದಿಲ್ಲದೆ ಪಕ್ಷ ಸಂಘಟನೆಗೆ ವೇದಿಕೆ ರೆಡಿ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲದೆ ಕಂಗೆಟ್ಟಿರೋ ಪಕ್ಷದ ಬಲವರ್ಧನೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಾವುಟ ಹಾರಿಸೋಕೆ ತಮ್ಮ ಎರಡನೇ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನ ಬಳಸಿಕೊಳ್ಳೋಕೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಜವಾಬ್ದಾರಿಯನ್ನ ಮೊಮ್ಮಗನಿಗೆ ನೀಡಿದ್ದಾರೆ. ತಾತ ಕೊಟ್ಟ ಆಜ್ಞೆಯನ್ನು ಪಾಲನೆ ಮಾಡೋಕೆ ಸಿದ್ದವಾಗಿರುವ ಪ್ರಜ್ವಲ್ ರೇವಣ್ಣ ಸಂಕ್ರಾಂತಿ ಬಳಿಕ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ತಿಂಗಳು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ, ಸದಸ್ಯ ನೊಂದಣಿ ಸೇರಿದಂತೆ ಪಕ್ಷ ಬಲವರ್ಧನೆ ಮಾಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos