ಬೆಂಗಳೂರು, ಮೇ. 24,ನ್ಯೂಸ್ ಎಕ್ಸ್ ಪ್ರೆಸ್: ಜೆಡಿಎಸ್ ಲೆಕ್ಕಾಚಾರ ಉಲ್ಟಾ ಆಗಿದೆ. ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡ ದೇವೇಗೌಡರು ಸೋತು ಕಂಗೆಟ್ಟು ಕುಳಿತಿದ್ದಾರೆ. ತಾತನ ಪರಿಸ್ಥಿತಿ ಕಂಡು ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡೋದಕ್ಕೆ ಸಿದ್ಧರಾಗಿದ್ದಾರೆ. ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ಸ್ವತ: ಪ್ರಜ್ವಲ್ ಅಮ್ಮ, ದೇವೇಗೌಡರ ಸೊಸೆ ಭವಾನಿ ರೇವಣ್ಣ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ತನ್ನ ಮಗನನ್ನು ರಾಜಕೀಯದಲ್ಲಿ ಭವಿಷ್ಯ ರೂಪಿಸಬೇಕು ಎಂದು ಕನಸು ಕಾಣ್ತಿದ್ದ ಭವಾನಿ ರೇವಣ್ಣನೇ ರಾಜೀನಾಮೆ ಕೊಡಿಸೋಕೆ ಮುಂದೆ ಬಂದಿರೋದು ಅಚ್ಚರಿ ಮೂಡಿಸಿದೆ.
ಭವಾನಿ ರೇವಣ್ಣ ಕಣ್ಣೀರು..!
ಮಗನ ರಾಜೀನಾಮೆಗೆ ಭವಾನಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ದೇವೇಗೌಡರ ಪದ್ಮನಾಭನಗರದ ನಿವಾಸದಲ್ಲಿ ಭವಾನಿ ರೇವಣ್ಣ, ರಾಜಕೀಯದಲ್ಲಿ ಸೋಲು,ಗೆಲುವು ಸರ್ವೇಸಾಮಾನ್ಯ. ಸೋತಾಗ ನಾವು ಎದೆಗುಂದಬಾರದು. ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡ್ತಾನೆ. ಹಾಸನದಲ್ಲಿ ಮತ್ತೆ ನೀವು ನಿಂತು ಗೆದ್ದು ಬನ್ನಿ. ಎಂದು ಮಾವ ದೇವೇಗೌಡರಿಗೆ ಸಮಾಧಾನ ಮಾತುಗಳನ್ನಾಡಿದ್ದಾರೆ. ದೇವೇಗೌಡರಿಗೆ ಸಮಾಧಾನ ಹೇಳೋವಾಗ ಭವಾನಿ ರೇವಣ್ಣ ಕಣ್ಣೀರಾಗಿದ್ದಾರೆ ಎನ್ನಲಾಗಿದೆ.