ಚಿತ್ರದುರ್ಗ, ಮೇ. 7, ನ್ಯೂಸ್ ಎಕ್ಸ್ ಪ್ರೆಸ್: ಇಂದು ಚಿತ್ರದುರ್ಗದ ಮುರಘಾ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ 2018ನೇ ಪ್ರತಿಷ್ಠಿತ ಬಸವ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮೈಸೂರು ಅರಮನೆ ಪರವಾಗಿ ಚಿತ್ರದುರ್ಗದ ಮುರಾಘ ಮಠಕ್ಕೆ ಬಂದಿದ್ದು ಇದೇ ಮೊದಲು ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದ್ದಾರೆ. 12ನೇ ಶತಮಾನ ಕಾಲದ ಬಸವಣ್ಣ ವಚನಗಳು ಇಂದಿಗೂ ನಮಗೆ ದಾರಿ. ಬಸವಣ್ಣನ ಲಾಜಿಕ್ ಇಟ್ಟುಕೊಂಡು ನಾವು ಕೆಲಸ ಮಾಡಬೇಕು. ನಮ್ಮ ತಾತನವರ ಕಾಲದಿಂದ ಈ ಮಠಕ್ಕೆ ಉತ್ತಮ ಸಂಬಂಧ ಇದೆ. ಇಲ್ಲಿಗೆ ಬಂದಾಗ ಗುರುಗಳು ನನಗೆ ಇಲ್ಲೇ ಇರಿ ಎಂದು ಹೇಳುತ್ತಾರೆ. ಇನ್ನು ಮುಂದೆ ಅರಮನೆ ನಿಮ್ಮ ಅರಮನೆ ಅಂದುಕೊಳ್ಳಿ. ಅರಮನೆ ಅನ್ನೋದು ಎಲ್ಲರ ಅರಮನೆ, ಅದು ನಮ್ಮ ಸಂಸ್ಕೃತಿ, ಎಲ್ಲರ ಸ್ವತ್ತು ಎಂದು ಯದುವೀರ್ ಒಡೆಯರ್ ಹೇಳಿದರು.