ಮೈಸೂರು, ಸೆ. 27 : ದಸರಾ ಹೊಸ್ತಿಲಲ್ಲಿ ಚಾಮುಂಡಿ ದಸರಾ ಮತ್ತು ಮಹಿಷ ದಸರಾ ನಡುವೆ ಸೈದ್ಧಾಂತಿಕ ಸಮರ ಶುರು. ಕೆಲವು ಪ್ರಗತಿಪರರು ಹಾಗೂ ಚಿಂತಕರು ಮಹಿಷ ದಸರಾ ಆಚರಣೆ ಮಾಡಲು ಮುಂದಾಗಿದ್ದು, ಈ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಇದೆ. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಮೂರ್ತಿ ಬಳಿ ಶಾಮಿಯಾನ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಸಂಸದ ಪ್ರತಾಪ್ ಸಿಂಹ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ವಿರುದ್ಧ ಕೂಗಾಡಿ ಬೊಬ್ಬೆ ಹಾಕಿದ್ದಾರೆ. ಮಹಿಷಾಸುರ ಮೂರ್ತಿ ಎದರು ಶಾಮಿಯಾನ ಹಾಕಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು? ಪೊಲೀಸರ ವಿರುದ್ಧ ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್ ನಡುವೆ ನಡೆದ ಪ್ರಸಂಗ ಇದಾಗಿದೆ.