ಹೆಚ್.ಡಿಕೆ ವಿರುದ್ದ ವಾಗ್ದಾಳಿ ನಡೆಸಿದ ಡಿ.ಕೆ ಸುರೇಶ್

ಹೆಚ್.ಡಿಕೆ ವಿರುದ್ದ ವಾಗ್ದಾಳಿ ನಡೆಸಿದ ಡಿ.ಕೆ ಸುರೇಶ್

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಚಾರ ಮಾಡಿದರು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಡಿ.ಕೆ. ಸುರೇಶ್ ಭರ್ಜರಿ ಪ್ರಚಾರ ಮಾಡಿದರು.

ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಅವರು  ಸುಳ್ಳು ಹೇಳೋದ್ರಲ್ಲಿ ಕುಮಾರಸ್ವಾಮಿಗೆ ಡಾಕ್ಟರೇಟ್ ಕೊಡಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಅಂತ ಸ್ಥಿತಿ ಹಿಂದೆನೂ ಬಂದಿಲ್ಲ. ಮುಂದೇನೂ ಬರೋದಿಲ್ಲ. ಗೌರವ ಕೊಡ್ತಾ ಇದೀವಿ ಅಂತ ಬೇರೆ ರೀತಿ ಬಿಂಬಿಸಿಕೊಳ್ಳೋದು ಒಳ್ಳೆಯದಲ್ಲ. ಚರ್ಚೆಗೆ ಸಿದ್ದವಾಗಿದ್ದೇವೆ. ಚುನಾವಣೆ ಆದಮೇಲೆ ಚರ್ಚೆಗೆ ಬರುತ್ತೇವೆ ಎಂದು ಸವಾಲ್ ಹಾಕಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಸುರೇಶ್, ಡಿಕೆ ಶಿವಕುಮಾರ್ ಗೆ ಅಂತಃ ಸ್ಥಿತಿ ಈ ಹಿಂದೆಯೂ ಬಂದಿಲ್ಲ. ಮುಂದೇನು ಬರುವುದಿಲ್ಲ ಗೌರವ ಕೊಡುತ್ತಿದ್ದೇವೆ ಎಂದು ಬೇರೆ ರೀತಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಚರ್ಚೆಗೆ ಸಿದ್ದರಿದ್ದೇವೆ ಚುನಾವಣೆ ನಂತರ ಚರ್ಚೆಗೆ ಬರುತ್ತೇವೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos