ಕನಿಷ್ಠ 25 ಸೀಟ್ ಗೆಲುವುದು ಭರವಸೆ ಹೊಂದಿದ್ದೇವೆ ತೇಜಸ್ವಿ ಸೂರ್ಯ!

ಕನಿಷ್ಠ 25 ಸೀಟ್ ಗೆಲುವುದು ಭರವಸೆ ಹೊಂದಿದ್ದೇವೆ ತೇಜಸ್ವಿ ಸೂರ್ಯ!

ಬೆಂಗಳೂರು: ಇಡೀ ದೇಶದಲ್ಲಿ ಮೋದಿ ಅವರ ಸುನಾಮಿ ಇದೆ. ದೇಶದ ಬಡ ಜನ ಇವತ್ತು ನರೇಂದ್ರ ಮೋದಿಯವರ ಹೆಸರಿನಲ್ಲಿ ಹೊಸ ಆಶಯ ಕನಸನ್ನು ಕಾಣುತ್ತಿದ್ದಾರೆ. ನಾನು ಬಹಳ ಕಾನ್ಫಿಡೆಂಟಾಗಿ ಹೇಳಬಲ್ಲೆ, ಆತ್ಮವಿಶ್ವಾಸದಿಂದ ಹೇಳಬಲ್ಲೆ, ಕರ್ನಾಟಕದಲ್ಲಿ ಈ ಬಾರಿ ಕನಿಷ್ಠ ಅಂದ್ರು 25 ಸೀಟ್ ಭಾರತೀಯ ಜನತಾ ಪಾರ್ಟಿ ಗೆಲ್ಲುತ್ತದೆ. ಆ ಕಾರಣಕ್ಕೆ ಕಾಂಗ್ರೆಸ್ನ ಮಂತ್ರಿಗಳು ಕೂಡ ಈ ಸತ್ಯ ಅವರಿಗೆ ಗೊತ್ತಿರುವುದರಿಂದ.  ಚುನಾವಣೆಯಲ್ಲಿ ಕಂಟೆಸ್ಟೆಂಟ್ ಮಾಡುವುದಕ್ಕೆ ಹಿಂದೆ ಹೊಗುತ್ತಿದ್ದಾರೆ.  ಜನರ ಮನಸ್ಸು, ಜನರ ಸಂಕಲ್ಪ,  ಮೋದಿ ಜೊತೆಗಿದೆ.

ಕರ್ನಾಟಕದಲ್ಲಿ ಅಭೂತ ಪೂರ್ವಕವಾದ ಗೆಲುವು ಭಾರತೀಯ ಜನತಾ ಪಾರ್ಟಿಗೆ, ನರೇಂದ್ರ ಮೋದಿಯವರಿಗೆ ಜನ ಕೊಡುತ್ತಾರೆ. ಇವತ್ತು ರಾಜ್ಯದಲ್ಲಿ ದೇಶದಲ್ಲಿ ಇರುವಂತದ್ದು ಮೋದಿ ಸುನಾಮಿ. ಸುನಾಮಿಯನ್ನ ಯಾರು ಅಡ್ಡಗಾಲು ಹಾಕುವುದಕ್ಕೆ ಆಗುವುದಿಲ್ಲ, ಗೋಡೆ ಕಟ್ಟೋದಕ್ಕೆ ಆಗೋದಿಲ್ಲ, ಅದಕ್ಕೆ ಡ್ಯಾಮ್ ಕಟ್ಟಲಿಕ್ಕೆ ಆಗುವುದಿಲ್ಲ, ಸುನಾಮಿ ಬಂದ್ರೆ ಅದು ಎಲ್ಲರನ್ನು ಅಪ್ಪಳಿಸಿ ಬರುವಂತದ್ದು. ಎಲ್ಲಾ ಅಡ್ಡ ಗೋಡೆಗಳನ್ನು ಮೀರಿ ಬರುವಂತದ್ದೇ ಸುನಾಮಿ. ಯಾರೇ  ಅಡ್ಡ ಕಟ್ಟಲಿ ಅದನ್ನ ಮೀರಿ ನರೇಂದ್ರ ಮೋದಿ ಸುನಾಮಿ ಕರ್ನಾಟಕದಲ್ಲಿ ಕನಿಷ್ಠ 25 ಸೀಟನ್ನು ಪಡೆದುಕೊಳ್ಳುವುದರಲ್ಲಿ ಯಾರು ಸಹ ತಪ್ಪಿಸಲು ಸಾಧ್ಯವಿಲ್ಲ ಎಂದ ತೇಜಸ್ವಿ ಸೂರ್ಯ.

ಫ್ರೆಶ್ ನ್ಯೂಸ್

Latest Posts

Featured Videos