ದೇವನಹಳ್ಳಿ, ಅ. 21: ತಾಲೂಕಿನ ಚಪ್ಪರಕಲ್ಲು ಬಳಿ ಇರುವ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಪ್ರದೀಪ್ ಪೂಜಾರಿ ನೇತೃತ್ವದಲ್ಲಿ ಹಾಗೂ ಪೊಲೀಸ್ ಸಿಬ್ಬಂಧಿಗಳ ಸಹಕಾರದಲ್ಲಿ ಅದ್ದೂರಿಯಾಗಿ ದಸರಾ ಆಯುಧ ಪೂಜೆ ನೆರವೇರಿಸಲಾಯಿತು.
ಪಿಎಸ್ಐ ಪ್ರದೀಪ್ ಪೂಜಾರಿ ಮಾತನಾಡಿ, ಸಾಂಪ್ರಾದಾಯಿಕವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಯುಧ ಪೂಜೆ ಮಾಡಲಾಗಿದೆ. ಠಾಣೆಯಲ್ಲಿ ಉಪಯೋಗಿಸುವ ಎಲ್ಲಾ ವಸ್ತುಗಳಿಗೆ ಪೂಜೆ ಸಲ್ಲಿಸಲಾಗಿದೆ. ವರ್ಷವಿಡೀ ಅಸ್ತ್ರಗಳನ್ನು ಉಪಯೋಗಿಸುತ್ತೇವೆ. ಇದೊಂದು ದಿನ ಬಹಳ ಭಕ್ತಿಯಿಂದ ಅಸ್ತ್ರಗಳಿಗೆ ಹಾಗು ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಎಲ್ಲಾ ಸಿಬ್ಬಂದಿಗಳು ಒಂದೇ ರೀತಿಯ ಭಾರತೀಯ ಸಂಪ್ರದಾಯ ಉಡುಗೆಗಳನ್ನು ತೊಡಗಿಸಿಕೊಂಡು ಹಬ್ಬದ ರೀತಿಯಲ್ಲಿ ಮಾಡಲಾಗುತ್ತಿದೆ. ನಮ್ಮಗಳಿಗೆ ಇದೊಂದು ಸುದಿನವಾಗಿದೆ ಎಂದು ಹೇಳಿದರು.
ಆಯುಧ ಪೂಜಾ ಕಾರ್ಯಕ್ರಮದಲ್ಲಿ ಡೈವೈಎಸ್ಪಿ ಟಿ.ರಂಗಪ್ಪ ಅವರನ್ನು ವಿಶ್ವನಾಥಪುರ ಪೊಲೀಸ್ ಠಾಣ ವತಿಯಿಂದ ಅಭಿನಂದಿಸಿದರು.
ಈ ವೇಳೆಯಲ್ಲಿ ದೊಡ್ಡಬಳ್ಳಾಪುರ ಡೈವೈಎಸ್ಪಿ ಟಿ.ರಂಗಪ್ಪ, ವಿಜಯಪುರ ವೃತ್ತನಿರೀಕ್ಷಕ ಪ್ರಕಾಶ್, ವಿಶ್ವನಾಥಪುರ ಪೊಲೀಸ್ ಸಿಬ್ಬಂಧಿ ವರ್ಗ ಮತ್ತಿತರರು ಇದ್ದರು.