ಮಧುಗಿರಿ: ಕರ್ನಾಟಕ ಕುಮಾರ ಪಡೆ ಸಂಘಟನೆಯ ಮಧುಗಿರಿ ಯೂತ್ ತಾಲ್ಲೂಕು ಅಧ್ಯಕ್ಷರನ್ನಾಗಿ ಕಣಿಮಯ್ಯ ದೊಡ್ಡೇರಿ ರವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ. ಕುಮಾರ್ ಗೌಡ್ರು ತಿಳಿಸಿದ್ದಾರೆ .
“ಕಟ್ಟೋಣ ನಾವು ಹೊಸ ನಾಡನ್ನು’ ಎಂಬ ಶೀರ್ಷಿಕೆಗೆ ಬದ್ಧರಾಗಿ ಈ ಸಂಘಟನೆಯನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೊನ್ಮುಖರಾಗಿ ನಾಡಿನ ನೆಲ -ಜಲ-ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಬಡವರ, ರೈತರ, ಕಾರ್ಮಿಕರ ಸಾಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ನಿರ್ವಹಿಸಲು ಕರ್ನಾಟಕ ಕುಮಾರ ಪಡೆ ಸಂಘಟನೆಯ ನಿಯಮಾವಳಿ ಪ್ರಕಾರ ಕಣಿಮಯ್ಯ ದೊಡೇರಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.