ಅನರ್ಹರಿಗೆ ಸೂಕ್ತ ಪರಿಹಾರ ಸಿಗಬಹುದು: ಬೊಮ್ಮಾಯಿ  

ಅನರ್ಹರಿಗೆ ಸೂಕ್ತ ಪರಿಹಾರ ಸಿಗಬಹುದು: ಬೊಮ್ಮಾಯಿ  

ಕಲಬುರಗಿ, ಸೆ. 23: ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ.. ಇದೊಂದು ಸಾಂವಿಧಾನಿಕ ಬಿಕ್ಕಟ್ಟಾಗಿದ್ದು. ಕೋರ್ಟ್ ನಲ್ಲಿ ಇದಕ್ಕೇ ಸೂಕ್ತ ಪರಿಹಾರ ಸಿಗಬಹುದು ಎಂಬ ವಿಶ್ವಾಸವಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು. ಅನರ್ಹ ಶಾಸಕರ ವಿಚಾರ ರಾಜಕೀಯ ಗೊಂದಲವಾಗಿದೆ. ಒಂದೆಡೆ ಸ್ವೀಕರ್ ಅವರ ಅನರ್ಹತೆಯಿಂದ ಶಾಸಕರು ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಗೊದಲವಿದೆ. ಈ ಬಗ್ಗೆ ಹೆಚ್ಚು ಚರ್ಚೆಗೆ ಹೋಗುವುದಿಲ್ಲ. ಇದೊಂದು ಕಾನೂನಾತ್ಮಕ ಹೋರಾಟವಾಗಿದೆ. ಸುಪ್ರೀಂ ಕೋರ್ಟ್ ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos