ಪ್ರತ್ಯಕ್ಷ ಅಷ್ಟಲಕ್ಷ್ಮಿ ವಿನಾಯಕ ಯಜ್ಞ

ಪ್ರತ್ಯಕ್ಷ ಅಷ್ಟಲಕ್ಷ್ಮಿ ವಿನಾಯಕ ಯಜ್ಞ

ಕೆ.ಆರ್.ಪುರ, ಜ. 16: ನಾಡಿನ ಸುಖ ಶಾಂತಿಗಾಗಿ ಪ್ರತ್ಯಕ್ಷ ಅಷ್ಟಲಕ್ಷ್ಮಿ ವಿನಾಯಕ ಯಜ್ಞವನ್ನು ಇದೇ 18 ಶನಿವಾರದಂದು ನಡೆಸಲಾಗುವುದೆಂದು ಶಾಂತಾ ಕೃಷ್ಣಮೂರ್ತಿ ಫೌಂಡೇಷನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ತಿಳಿಸಿದರು.

ಪ್ರತಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರದಂದು ನಡೆಯುವ `ಪ್ರತ್ಯಕ್ಷ ಅಷ್ಟಲಕ್ಷ್ಮಿ ವಿನಾಯಕ ಯಜ್ಞ´ ಹಾಗೂ `ಮಹಾ ಲಕ್ಷ್ಮಿ ದೀಪೋತ್ಸವ ´ ಕಾರ್ಯಕ್ರಮದಲ್ಲಿ ಮೂರುಸಾವಿರ ಮಂದಿ ದಂಪತಿಗಳ ಸಮ್ಮುಖದಲ್ಲಿ ನಡೆಯಲಿದ್ದು, ಗುರುವಯ್ಯರಿನ ಸ್ವಾಮಿಗಳ ನೇತೃತ್ವದಲ್ಲಿ ಜರುಗಲಿರುವ ಕಾರ್ಯಕ್ರ ಸಾರ್ವಜನಿಕ ರಿಗೆ ಹೆಚ್ಚು ಸಹಕಾರಿಯಾಗಿದೆ ಎಂದು ಹೇಳಿದರು.

ಶಿವನ ಅಂಶವಾದ ಅಗಸ್ತ್ಯ ಮುನಿಗಳು ಈ `ಪ್ರತ್ಯಕ್ಷ ಅಷ್ಟಲಕ್ಷ್ಮಿ ವಿನಾಯಕ ಯಜ್ಞಾ´ ವನ್ನು ಮೊದಲು ಮಾಡಿ  ಲೋಕ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದರು, ಕೇತುಗ್ರಸ್ತ ಸೂರ್ಯಗ್ರಹಣ ಹಾಗೂ ತೋಳ ಗ್ರಸ್ತ ಚಂದ್ರ ಗ್ರಹಣದಿಂದ ನಾಡಿನ ಜನತೆಗೆ ಯಾವುದೇ ಸಮಸ್ಯೆ ಆಗದಿರಲೆಂದು ಈ ಯಜ್ಞವನ್ನು ಪುನಃ ಮಾಡಲಾಗುತ್ತಿದೆ ಎಂದು ನುಡಿದರು.

ವಿಶೇಷವಾಗಿ ಯಜ್ಞಕ್ಕೆ ಮರದ ಚುಕ್ಕೆಗಳನ್ನು ಉಪಯೋಗಿಸದೆ ಹಿಮಾಲಯದ ಸಾವಿರದ ಎಂಟು ವಿವಿಧ ಔಷಧಿ  ಗಿಡಮೂಲಿಕೆಗಳನ್ನು ಉಪಯೋಗಿಸುವುದು ವಿಶ್ಲೇಷಿಸಲಾಗಿದೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥ ದಂಪತಿಗಳಿಗೆ ಯಜ್ಞಕ್ಕೆ ಪಾಲ್ಗೊಳ್ಳಲು ಉಚಿತವಾಗಿ ಪಾಸ್ಗಳನ್ನು ನೀಡಿ ಅವರಿಗೂ ದೇವರ ಕೃಪೆಗೆ ಪಾತ್ರವಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೆವೆ.

ಫ್ರೆಶ್ ನ್ಯೂಸ್

Latest Posts

Featured Videos