ಒಡೆದು ಹೋದ ಕಾಲುವೆ

ಒಡೆದು ಹೋದ ಕಾಲುವೆ

ಗಂಗಾವತಿ : ತಿಂಗಳ ಹಿಂದಷ್ಟೇ ವಿಜಯನಗರ ಕಾಲುವೆಯ ದುರಸ್ತಿ ಕಾರ್ಯವನ್ನು ಆರ್.ಎನ್. ಶೆಟ್ಟಿ  ಅವರಿಗೆ ಸರಕಾರ ಗುತ್ತಿಗೆ ನೀಡಲಾಗಿದ್ದು, ಈಗಾಗಲೇ ಮಳೆ ನೀರಿಗೆ 15 ದಿನಗಳಾಗಿದೆ ಹಿಂದೆ ಸುರಿದ ಭಾರಿ ಮಳೆಗೆ ದುರಸ್ತಿ ಮಾಡಿದ್ದ ಕಾಲುವೆ ನೀರಿಗೆ ಕೊಚ್ಚಿ ಹೋಯಿತು.

ನಂತರ ಪುನ ನಡೆದ ಕಾಲುವೆ ದುರಸ್ತಿ ಕಾಮಗಾರಿ ಗುಣ ಮಟ್ಟದಿಂದ ಹಾಗಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಹಾಗೂ ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ ಮತ್ತು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಮತ್ತು ಅಲ್ಲಿಯ ಪ್ರಗತಿಪರ ರೈತರೊಂದಿಗೆ ಕೆಲಸದ ಮೇಲೆ ಹೋಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ, ಟೆಂಡರ್ ಪಡೆದ ಕಂಪನಿ  ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ, ರೀತಿ ಕೆಲಸ ಮಾಡಿದರೆ ಕಾಲುವೆ ಒಡೆದುಹೋಗುತ್ತದೆ ಎಂದು ಎಚ್ಚರಿಸಿದ್ದರು.

ಆದರೆ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಮನಸ್ಸಿಗೆ ಬಂದAತೆ ಕಾಮಗಾರಿ ಮಾಡಿದ್ದರಿಂದ ವಿಜಯನಗರ ಕಾಲುವೆ 15ದಿನಗಳಲ್ಲಿ ಎರಡು ಬಾರಿ ಒಡೆದು ಹೋಗಿದೆ.

ಫ್ರೆಶ್ ನ್ಯೂಸ್

Latest Posts

Featured Videos