ಜ.21ಕ್ಕೆ ಗ್ರಾಮದೇವತೆಯ 6ನೇ ವಾರ್ಷಿಕೋತ್ಸವ

ಜ.21ಕ್ಕೆ ಗ್ರಾಮದೇವತೆಯ 6ನೇ ವಾರ್ಷಿಕೋತ್ಸವ

ಹುಬ್ಬಳ್ಳಿ, ಜ. 20: ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದ ದ್ಯಾಮವ್ವದೇವಿಯ 6 ನೇಯ  ವಾರ್ಷಿಕೋತ್ಸವ ಸಮಾರಂಭವು ಇದೇ ಜ. 21 ರಂದು ಮಂಗಳವಾರ ಪ್ರಾಥ:ಕಾಲ ಬೆಳಿಗ್ಗೆ 5 ಗಂಟೇಗೆ ದೇವಿಗೆ ಮಹಾಭಿಷೇಕ ನೆರವೇರಲಿದೆ.

ಸಮಾರಂಭದ ಸಾನಿಧ್ಯವನ್ನು ಶಿವಯೋಗಿ ಶಾಸ್ತ್ರಿಗಳು ವಹಿಸಲಿದ್ದು, ಹೋಮ ಕಾರ್ಯ, ಉಡಿ ತುಂಬುವ ಕಾರ್ಯ, ನಂತರ ಸಕಲ ವಾಧ್ಯಗಳೊಂದಿಗೆ  ಪಲ್ಲಕ್ಕಿ ಉತ್ಸವ ಮತ್ತು ಮಹಾಮಂಗಳಾರತಿ ಜರುಗಲಿದೆ. ಸಾಯಂಕಾಲ 5 ಗಂಟೇಗೆ ಧರ್ಮಸಭೆ ನಡೆಯಲಿದ್ದು, ಶಿವಲಿಂಗೇಶ್ವರ ಮಹಾಸ್ವಾಮಿ ಮಂಟೂರು, ಶಿವಯೋಗಿಶ್ವರ ಮಹಾಸ್ವಾಮಿಗಳು ಬೊಮ್ಮನಹಳ್ಳಿ, ಬಸವಣ್ಣಜ್ಜ ಮಹಾಸ್ವಾಮಿಗಳು ಕುಂದಗೋಳ, ಮೃತ್ಯುಂಜಯ ಮಹಾಸ್ವಾಮಿಗಳು ಅಣ್ಣಿಗೇರಿ, ಚನ್ನಯ್ಯ ಹಿರೇಮಠ ಗುರುಗಳು ಇವರಿಂದ ಆರ್ಶಿವಚನ ಇರಲಿದೆ.

ಸಕಲ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಇರಲಿದ್ದು, ಸಕಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಕ್ತ ಕಮೀಟಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos