ಮಂಗಳೂರು, ಸೆ. 26 : ಮಂಗಳೂರಿನ ಸೌಹಾರ್ದತೆಯ ಸ್ಟೋರಿಯೊಂದು ವೈರಲ್ ಆಗುತ್ತಿರುವ ಸಮಯದಲ್ಲೇ ಅಲ್ಲಿನ ಸ್ಥಳೀಯ ಯುವಕರ ಗುಂಪುಗಳ ನಡುವಿನ ಘರ್ಷಣೆಯ ಘಟನೆ ವಿಡಿಯೋ ವೈರಲ್ ಆಗುತ್ತಿದೆ.
’ಭಾರತ ಹಿಂದೂ ರಾಷ್ಟ್ರ’ ಎಂದಿದ್ದಕ್ಕೆ ಯುವಕನ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಟ್ವಾಳ ಮೂಲದ ಯುವಕನ ಮೇಲೆ ಮಂಗಳೂರಿನ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.