ಕಲ್ಲಿನಿಂದ ಜಜ್ಜಿ ಯುವಕನ ಭೀಕರ ಕೊಲೆ

ಕಲ್ಲಿನಿಂದ ಜಜ್ಜಿ ಯುವಕನ ಭೀಕರ ಕೊಲೆ

ಬೆಳಗಾವಿ, ಜೂನ್. 13: ಜಿಲ್ಲೆಯ ಅರಣ್ಯ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ಚಾಲಕನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಾತ್ರಾಳ ಬಳಿ ನಡೆದಿದೆ.

ಶ್ರೀಕಾಂತ್​​​ ಕಳ್ಳಿಮನಿ (22) ಕೊಲೆಯಾದ ದುರ್ದೈವಿ. ಕಳೆದ ಒಂದು ವಾರದಿಂದ ಅರಣ್ಯ ಇಲಾಖೆಯ ಕಾಮಗಾರಿಯಲ್ಲಿ ತೊಡಗಿದ ಶ್ರೀಕಾಂತ್​​ನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿದ್ದಾರೆ. ಚಿದಂಬರ ಆಡಿನ್​​​ ಮಾಲೀಕತ್ವದ ಜೆಸಿಬಿಯಲ್ಲಿ ಮೃತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಪ್ರಕರಣ ಸವದತ್ತಿ ಪೊಲೀಸ್​​ ಠಾಣೆಯಲ್ಲಿ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos