ರಾಯಚೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಅವರು ರಾಯಚೂರು ಜಿಲ್ಲೆಯ ಯುವಕನ ಮನವಿಗೆ ಸ್ಪಂದಿಸಿದ್ದಾರೆ. ಲಿಂಗಸುಗೂರಿನ ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ, ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ದೇವರಬುಪೂರು ಗ್ರಾಮದ ಯುವಕ ಅಮರೇಶ್ ಪ್ರಧಾನಿಗೆ ಟ್ವೀಟ್ ಮಾಡಿದ್ದರು.
ಬೆಳಕನ್ನೆ ಕಾಣದ ಜಿಲ್ಲೆಯ ದೊಡ್ಡಿಗಳಿಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ ಯುವಕನ ಟ್ವೀಟ್ಗೆ ಸ್ಪಂದಿಸಿ ಮೂರು ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶ ನೀಡಿದ್ದಾರೆ. 2018 ಸೆಪ್ಟೆಂಬರ್ 15 ರಂದು ಪ್ರಧಾನ ಮಂತ್ರಿ ಕಚೇರಿ ಟ್ವೀಟರ್ ಅಕೌಂಟ್ ಗೆ ಮಾಡಿದ ಅಮರೇಶ್ ಟ್ವೀಟ್ ಗೆ ಅಕ್ಟೋಬರ್ 1 ರಂದು ಕೇಂದ್ರ ಗ್ರಾಮೀಣ ವಿದ್ಯುದ್ದೀಕರಣ ನಿಗಮದಿಂದ ಸ್ಪಂದನೆ ಬಂದಿತ್ತು. ಯುವಕ ತಾನು ಮೋದಿ ಅವರಿಗೆ ಟ್ವೀಟ್ ಮಾಡಿದ ವಿಷಯವನ್ನು ವಿದ್ಯುತ್ ಸಂಪರ್ಕ ಕಾರ್ಯ ಆರಂಭಗೊಂಡಾಗ ಎಲ್ಲರ ಬಳಿ ಹೇಳಿಕೊಂಡಿದ್ದಾರೆ.