ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಮತಹಬ್ಬವು ರಾಜ್ಯದೆಲ್ಲೇಡೆ ಜೋರಾಗಿ ನಡೆಯುತ್ತಿದೆ. ಕನ್ನಡ ಚಿತ್ರರಂಗದ ನಟ ಶಿವರಾಜ್ ಕುಮಾರ್ ರವರು ತಮ್ಮ ಮತ ಚಲಾಯಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ರಾಚೇನಹಳ್ಳಿಯಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯ ಮತ್ತು ಹಕ್ಕು. ನಾನು ಇವತ್ತು ವೋಟ್ ಮಾಡಿದ್ದೀನಿ, ನೀವೂ ಕೂಡ ವೋಟ್ ಮಾಡಿ.
ಅವರು ಏನ್ ಮಾಡಿದ್ದಾರೆ, ಇವರು ಏನ್ ಮಾಡಿದ್ದಾರೆ ಅನ್ನೋದಕ್ಕಿಂತ ಮೊದಲು ನಿಮ್ಮ ಕರ್ತವ್ಯ ನೀವು ಮಾಡಿ. ನಿಮ್ಮ ಪ್ರತಿನಿಧಿಗಳು ಕೊಟ್ಟ ಭರವಸೆಗಳನ್ನ ಉಳಿಸಿಕೊಂಡಿಲ್ಲ, ಅದನ್ನ ಪ್ರಶ್ನೆ ಮಾಡಿ. ಅವರನ್ನ ಸುಮ್ಮನೆ ಬಿಡಬೇಡಿ, ಪ್ರಶ್ನೆ ಮಾಡಿ, ಅದು ನಿಮ್ಮ ಹಕ್ಕು. ಅದು ಬಿಟ್ಟು ಯಾರೂ ಏನೂ ಮಾಡುತ್ತಿಲ್ಲ ಅಂತಾ ನೀವೂ ಸುಮ್ಮನೆ ಕೂರೋದು ತಪ್ಪು. ಮನೆಯಲ್ಲಿ ಸುಮ್ಮನೆ ಮಲಗಿದ್ದರೆ, ದಯವಿಟ್ಚು ಎದ್ದು ಬಂದು ವೋಟ್ ಮಾಡಿ ಅಂತಾ ಜನರಲ್ಲಿ ಮನವಿ ಮಾಡಿಕೊಂಡರು