ಬೆಂಗಳೂರು, ಜ. 9 : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಘ ಪರಿವಾರದಿಂದ ಹಿರಿಯರು ಕಿವಿಮಾತು ಹೇಳಿದ್ದಾರೆ.
ಆದಷ್ಟು ವಿವಾದಾತ್ಮಕ ಶಾಸಕರನ್ನು ಸಂಪುಟಕ್ಕೆ ಪರಿಗಣಿಸಬೇಡಿ, ನಿಮ್ಮ ಸರ್ಕಾರ ಈಗ ಸುಭದ್ರವಾಗಿದೆ. ಮುಂದೆ ಇನ್ನೂ ಎರಡು ಅವಧಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರಬೇಕು. ಅದಕ್ಕಾಗಿ ಆದಷ್ಟು ಕ್ಲೀನ್ ಇಮೇಜ್ ಇರೋ ಶಾಸಕರಿಗೇ ಸಚಿವ ಸ್ಥಾನ ನೀಡೋದು ಒಳ್ಳೆಯದು. ಬಾಯಿಗೆ ಬಂದಂತೆ ಮಾತನಾಡುವ, ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಡ್ಯಾಮೇಜ್ ಮಾಡಿಕೊಂಡು ಪಕ್ಷದ ಮರ್ಯಾದೆ ತೆಗೆದಿರೋರನ್ನು ದೂರ ಇಟ್ಟು ಬಿಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಇಂಥವರು ಪಕ್ಷದ ವರ್ಚಸ್ಸಿನ ದೃಷ್ಟಿಯಿಂದ, ಆಡಳಿತಾತ್ಮಕ ದೃಷ್ಟಿಯಿಂದಲೂ ಕೇಡನ್ನೇ ಉಂಟು ಮಾಡುತ್ತಾರೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮ್ಮ ಮಾತು ತಲೆಯಲ್ಲಿರಲಿ, ಶಾಸಕರು ಎಷ್ಟೇ ಪ್ರಬಲರಿದ್ದರೂ ಅವರ ವ್ಯಕ್ತಿತ್ವ, ಕ್ಲೀಮ್ ಇಮೇಜ್, ಪಕ್ಷಕ್ಕೆ ನೀಡಿದ ಕೊಡುಗೆ ಎಲ್ಲವನ್ನೂ ಪರಿಗಣಿಸಿ ಎಂದು ಸಲಹೆಯನ್ನು ಆರ್ಎಸ್ ಎಸ್ ನಾಯಕರಿಂದ ಯಡಿಯೂರಪ್ಪಗೆ ಸಲಹೆ ನೀಡಲಾಗಿದೆ.