ನವದೆಹಲಿ: ಕರ್ನಾಟಕದಲ್ಲಿ ಯಾವುದೇ
ಆಪರೇಷನ್ ಕಮಲ ಇಲ್ಲ. ನಾಲ್ಕೈದು ಜನ ಮುಂಬೈನಲ್ಲಿದ್ದಾರೆ. ಕೆಲವರು ಶಿರಡಿ ಹಾಗೂ ಇನ್ನೂ ಕೆಲವರು
ಬೇರೆಬೇರೆ ಕಡೆ ಇದ್ದಾರೆ. ಅವೆರಲ್ಲ ಮುಂಬೈನಲ್ಲಿ ಸೇರಿದ್ದಾರೆ. ಎಲ್ಲರೂ ಕಾಂಗ್ರೆಸ್ನಲ್ಲೇ
ಇದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಕರ್ನಾಟಕ
ರಾಜ್ಯದ ವಿವಿಧ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಖರ್ಗೆ ಆಪರೇಷನ್ ಕಮಲ ಹಾಗೂ ಶಾಸಕರು ಕಾಂಗ್ರೆಸ್ ತೊರೆಯುತ್ತಾರೆ ಎಂಬುದನ್ನು ಅವರು ನಿರಾಕರಿಸಿದರು. ನಾಲ್ಕರಿಂದ ಐದು ಶಾಸಕರು ಮುಂಬೈನಲ್ಲಿದ್ದಾರೆ. ಅದರಲ್ಲಿ ಕೆಲವರು ಶಿರಡಿಗೆ ಹೋಗಿದ್ದಾರೆ.
ಕೆಲವರು ಮುಂಬೈನಲ್ಲಿದ್ದಾರೆ. ಇನ್ನು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹೀಗಾಗಿ, ಅವರು ಸ್ವಲ್ಪ ನಿರಾಸೆರಾಗಿದ್ದಾರೆ. ಅವರ ಜತೆ ಮಾತುಕತೆ ನಡೆಸಿದ್ದೇವೆ. ಎಲ್ಲರೂ ನಮ್ಮ ಜತೆಯೇ ಇದ್ದಾರೆ. ಕೆಲವರು ಈಗಾಗಲೇ ನಾವು ಕಾಂಗ್ರೆಸ್ ಜತೆಯೇ ಇದ್ದೇವೆ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು
ತಿಳಿಸಿದ್ದಾರೆ.