ಯಾವ್​ ಆಪರೇಷನ್​​​​ ಇಲ್ಲಾರಿ.. ಎಲ್ಲಾ ಊಹಾಪೋಹ: ಮಲ್ಲಿಕಾರ್ಜುನ್ ಖರ್ಗೆ

ಯಾವ್​ ಆಪರೇಷನ್​​​​ ಇಲ್ಲಾರಿ.. ಎಲ್ಲಾ ಊಹಾಪೋಹ: ಮಲ್ಲಿಕಾರ್ಜುನ್ ಖರ್ಗೆ

ನವದೆಹಲಿ: ಕರ್ನಾಟಕದಲ್ಲಿ ಯಾವುದೇ
ಆಪರೇಷನ್​ ಕಮಲ ಇಲ್ಲ. ನಾಲ್ಕೈದು ಜನ ಮುಂಬೈನಲ್ಲಿದ್ದಾರೆ. ಕೆಲವರು ಶಿರಡಿ ಹಾಗೂ ಇನ್ನೂ ಕೆಲವರು
ಬೇರೆಬೇರೆ ಕಡೆ ಇದ್ದಾರೆ. ಅವೆರಲ್ಲ ಮುಂಬೈನಲ್ಲಿ ಸೇರಿದ್ದಾರೆ. ಎಲ್ಲರೂ ಕಾಂಗ್ರೆಸ್​​ನಲ್ಲೇ
ಇದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಕರ್ನಾಟಕ
ರಾಜ್ಯದ ವಿವಿಧ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಖರ್ಗೆ ಆಪರೇಷನ್​ ಕಮಲ ಹಾಗೂ ಶಾಸಕರು ಕಾಂಗ್ರೆಸ್​ ತೊರೆಯುತ್ತಾರೆ ಎಂಬುದನ್ನು ಅವರು ನಿರಾಕರಿಸಿದರು. ನಾಲ್ಕರಿಂದ ಐದು ಶಾಸಕರು ಮುಂಬೈನಲ್ಲಿದ್ದಾರೆ. ಅದರಲ್ಲಿ ಕೆಲವರು ಶಿರಡಿಗೆ ಹೋಗಿದ್ದಾರೆ.

ಕೆಲವರು ಮುಂಬೈನಲ್ಲಿದ್ದಾರೆ. ಇನ್ನು ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹೀಗಾಗಿ, ಅವರು​ ಸ್ವಲ್ಪ ನಿರಾಸೆರಾಗಿದ್ದಾರೆ. ಅವರ ಜತೆ ಮಾತುಕತೆ ನಡೆಸಿದ್ದೇವೆ. ಎಲ್ಲರೂ ನಮ್ಮ ಜತೆಯೇ ಇದ್ದಾರೆ. ಕೆಲವರು ಈಗಾಗಲೇ ನಾವು ಕಾಂಗ್ರೆಸ್​ ಜತೆಯೇ ಇದ್ದೇವೆ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು
ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos