ಕೆಲವೇ ಗಂಟೆಗಳಲ್ಲಿ ‘ಯಜಮಾನ’ ಟಿಕೆಟ್ ಸೋಲ್ಡ್ ಔಟ್

ಕೆಲವೇ ಗಂಟೆಗಳಲ್ಲಿ ‘ಯಜಮಾನ’ ಟಿಕೆಟ್ ಸೋಲ್ಡ್ ಔಟ್

ಬೆಂಗಳೂರು: ‘ಯಜಮಾನ’ ಸಿನಿಮಾ ಬಿಡುಗಡೆಯ
ಸಂಭ್ರಮ ಜೋರಾಗಿದೆ‌. ಈಗಾಗಲೇ ‘ಯಜಮಾನ’ ಹವಾ ಎಲ್ಲೆಡೆ ಹಬ್ಬಿದ್ದು,‌ ದರ್ಶನ್ ಕಟೌಟ್ ಗಳು ಎಲ್ಲೆಲ್ಲೂ
ರಾರಾಜಿಸುತ್ತಿವೆ. ಈ ಬೆನ್ನಲ್ಲೇ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಇದೀಗ ಈ ಸಿನಿಮಾದ ಮುಂಗಡ
ಟಿಕೆಟ್ ಬುಕ್ಕಿಂಗ್ ಓಪನ್ ಮಾಡಲಾಗಿತ್ತು. ಇದೀಗ ಈ ಮುಂಗಡ ಟಿಕೆಟ್ ಕಂಪ್ಲೀಟ್ ಆಗಿದೆ.

ಹೌದು, ‘ಯಜಮಾನ’ ಸಿನಿಮಾದ ಕ್ರೇಜ್ ಈಗಾಗಲೇ ಹೆಚ್ಚಾಗಿದೆ. ನಿಜಕ್ಕೂ ಯಜಮಾನ ಬರುವ ದಿನವನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಈ‌ಸಿನಿಮಾ ಮಾರ್ಚ್ ಒಂದರಂದು ಅಬ್ಬರಿಸಲಿದ್ದಾರೆ. ಇದೀಗ ಈ ಸಿನಿಮಾ ಮೇಲಿನ ಕ್ರೇಜ್ ನೋಡಿ ಮುಂಗಡ ಬುಕ್ಕಿಂಗ್ ಓಪನ್ ಮಾಡಲಾಗಿತ್ತು. ಓಪನ್ ಮಾಡಿದ 24 ಗಂಟೆಯಲ್ಲಿಯೇ ಈ ಸಿನಿಮಾಗೆ ಮುಂಗಡ ಬುಕ್ಕಿಂಗ್ ಅಲ್ಲಿ ರಾಜ್ಯದ ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಆಗಿವೆ. ಇನ್ನು ದರ್ಶನ್ ಜೊತೆ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಉಳಿದಂತೆ, ತಾನ್ಯ ಹೋಪ್, ದೇವರಾಜ್, ಧನಂಜಯ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್ ಸೇರಿದಂತೆ ಬಹು ತಾರಾಗಣ ಚಿತ್ರದಲ್ಲಿದೆ. ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ಡೈರೆಕ್ಟರ್ ಕೂಡ ಆಗಿದ್ದಾರೆ. ಶೈಲಜಾ ನಾಗ್ ಚಿತ್ರದ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos