‘ಯಜಮಾನ’ ಚಿತ್ರದ ವಿತರಣೆ ಹಕ್ಕು: 4 ಲಕ್ಷ ವಂಚನೆ!

‘ಯಜಮಾನ’ ಚಿತ್ರದ ವಿತರಣೆ ಹಕ್ಕು: 4 ಲಕ್ಷ ವಂಚನೆ!

ಬೆಂಗಳೂರು, ಮೇ. 13, ನ್ಯೂಸ್ ಎಕ್ಸ್ ಪ್ರೆಸ್:‘ಯಜಮಾನ’ ಚಿತ್ರದ ವಿತರಣೆ ಹಕ್ಕು ಕೊಡಿಸ್ತೇನೆ ಎಂದು 4.50 ಸಾವಿರ ಲಕ್ಷ ರೂ.ಪಡೆದು ವಂಚಿಸಿದ್ದಾರೆ ಎಂದು ಅವಿನಾಶ್.ಹೆಚ್.ಪಿ ಎಂಬುವರು ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಅವಿನಾಶ್, ತಮ್ಮ ಗೆಳೆಯರಾದ ಅಭಿಷೇಕ್ ಗೌಡ, ಅಕ್ಷಯ್ ಗೌಡ, ದುರ್ಗೇಶ್ ಚೇತನ್ ಜೊತೆ ಸೇರಿ ಯಜಮಾನ ಚಿತ್ರದ ವಿತರಣೆ ಹಕ್ಕನ್ನು ಪಡೆಯಲು ಪ್ರೀತಂ ಎಂಬಾತನ್ನು ಅನಿಲ್ ಮತ್ತು ಸುರೇಶ್ ಸಂಪರ್ಕಿಸಿದ್ದಾಗ

ರವಿ ಚಿತ್ರ ಮಂದಿರ ಮತ್ತು ಕೆ.ಎಂ. ದೊಡ್ಡಿಯ ಮಾರುತಿ ಚಿತ್ರ ಮಂದಿರದ ವಿತರಣೆ ಹಕ್ಕನ್ನು ಪಡೆದುಕೊಂಡಿರೋದಾಗಿ ಆರೋಪಿಗಳು ಹೇಳಿದ್ದಾರೆ. ಅವಿನಾಶರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳೋದಾಗಿ ಹೇಳಿ ಅವರ ಕಡೆಯಿಂದ 4.50 ಲಕ್ಷ ಹಣ ಪಡೆದಿದ್ದ ಆರೋಪಿಗಳು, ಅಗ್ರಿಮೆಂಟ್ ಎರಡು ಚೆಕ್ ಗಳನನ್ನು ಪಡೆದುಕೊಂಡು ನಂತರ ವಿತರಣೆ ಹಕ್ಕನ್ನು ಕೊಡಿಸದೇ ಮೋಸ ಮಾಡಿದ್ದಾರೆ. ಹಣ ವಾಪಸ್ ಕೇಳಲು ಹೋದಾಗ ಪ್ರೀತಂ ಪ್ರಾಣ ಬೆದರಿಕೆ ಹಾಕಿದ್ದಾನೆ ಈ ಬಗ್ಗೆ ರವಿ, ಪ್ರೀತಂ ಸೇರಿ ಮೂವರ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos