ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ

ಕಾಲ್ನಡಿಗೆಯಲ್ಲಿ ಯದುವೀರ್ ಮತಯಾಚನೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಒಡೆಯರ್ ಅವರು ಸ್ಪರ್ಧಿಸುತ್ತಿದ್ದಾರೆ. ಲೋಕಾಸಭೆ ಚುನಾವಣೆ ರಾಜ್ಯದೆಲ್ಲಡೆ ಇನ್ನೇರಡು ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ಲೋಕಸಭೆ ಮೊದಲ ಹಂತದ ಚುನಾವಣೆ ಪ್ರಚಾರದ ಕೊನೆಯ ದಿನವಾಗಿದೆ.

ಇಂದು ಮಡಿಕೇರಿ ಮತ್ತು ವಿರಾಜಪೇಟೆ ಪಟ್ಟಣದಲ್ಲಿ ಯದುವೀರ ಒಡೆಯರ್  ಅವರು ಭರ್ಜರಿ ಮತಯಾಚನೆ ಮಾಡಿದರು. ಮಡಿಕೇರಿಯ ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ ಅವರು ಕಾಲ್ನಡಿಗೆಯಲ್ಲಿ ಮತ ಯಾಚಿಸಿದರು. ಮಹದೇವಪೇಟೆಯಿಂದ ಇಂದಿರಾಗಾಂಧಿ ವೃತ್ತದ ಮೂಲಕ ಜನರಲ್ ತಿಮ್ಮಯ್ಯ ವೃತ್ತದ ತನಕ ಮೆರವಣಿಗೆ ನಡೆಸಿದರು‌.

ನಟಿ ತಾರಾ ಅವರೂ ಈ ವೇಳೆ ಯದುವೀರ ಪರ ಮತ ಯಾಚಿಸಿದರು. ಈ ವೇಳೆ ಮಾತನಾಡಿದ ಅವರು, ‘ಯದುವಂಶದ ಯದುವೀರ ಅವರ ಪರ ಪ್ರಚಾರಕ್ಕೆ ಬಂದಿರುವುದು ಗೌರವ ತಂದಿದೆ. ಅವರು ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos