ನವದೆಹಲಿ, ಮಾ.15, ನ್ಯೂಸ್ ಎಕ್ಸ್ ಪ್ರೆಸ್ : ಆಸ್ಟ್ರೇಲಿಯಾದ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯ ಆರಂಭದಲ್ಲಿ 2-0ಯಿಂದ ಮುನ್ನಡೆಯಲ್ಲಿದ್ದ ಭಾರತ ಅಂತಿಮವಾಗಿ 2-3ರಿಂದ ಸರಣಿ ಕೈ ಚೆಲ್ಲಿತ್ತು.
ಭಾರತದ ಈಗಿರುವ ಪರಿಸ್ಥಿತಿ ನೋಡಿದರೆ ವಿಶ್ವಕಪ್ ಗೆಲ್ಲುವುದು ಅನುಮಾನ ಎಂಬಂತಿದೆ. ಆದರೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಲೂ ಗೆಲುವಿನ ನಂಬಿಕೆ ಉಳಿಸಿಕೊಂಡಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಏಕದಿನ 2 ಸರಣಿಗಳನ್ನು ಭಾರತ ಸೋಲು ಅನುಭವಿಸಿತ್ತು. ಈ ಸೋಲು ಭಾರತವನ್ನು ವಿಶ್ವಕಪ್ ನೆಲೆಯಲ್ಲಿ ಮರು ವಿಮರ್ಶೆಗೆ ಒಳಪಡುವಂತೆ ಮಾಡಿದೆ.
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿಶ್ವಕಪ್ ನಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳೂ ಕೂಡ ಪ್ರತಿಸ್ಪರ್ಧಿಗಳಿಗೆ ಭೀತಿಯೊಡ್ಡುತ್ತವೆ. ವಿಶ್ವಕಪ್ ನಲ್ಲಿ ಸ್ಪರ್ಧಿಸುವ ಯಾವ ತಂಡಗಳನ್ನೂ ಪ್ರಬಲ ಪೈಪೋಟಿಯಿಂದ ತಡೆಯಲಾಗದು’ ಎಂದು ಹೇಳಿದರು.