ಲಂಡನ್, ಮಾ.19, ನ್ಯೂಸ್ ಎಕ್ಸ್ ಪ್ರೆಸ್: ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶ್ವಕಪ್ ನಲ್ಲಿ ನಿಗದಿಯಂತೆ ಜಿದ್ದಾಜಿದ್ದಿ ನಡೆಸಲಿದೆ ಎಂದು ಐಸಿಸಿ ಮಂಡಳಿಯ ಸಿಇಒ ರಿಚರ್ಡ್ಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪುಲ್ವಾಮ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ ಪಾಕಿಸ್ತಾನದ ವಿರುದ್ಧ ವಿಶ್ವಕಪ್ನಲ್ಲಿ ಭಾರತ ಸೆಣಸಾಟ ಮಾಡಬಾರದು ಎಂದು ಬಿಸಿಸಿಐ ಸೇರಿದಂತೆ ಕೆಲವರು ನಿರ್ಧಾರ ತೆಗೆದುಕೊಂಡಿದ್ದರೂ ಕೂಡ ಈಗ ಕೆಲವು ಒಪ್ಪಂದಗಳ ಆಧಾರದ ಮೇಲೆ ಇಕ್ಕೆಲ ತಂಡಗಳು ಜೂನ್ 16 ರಂದು ನಡೆಯಲಿರುವ ಗುಂಪಿನ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದೆ.
ನ್ಯೂಜಿಲೆಂಡ್ ನಲ್ಲಿ ಇತ್ತೀಚೆಗೆ ಬಾಂಗ್ಲಾ ತಂಡದ ವ ಆಟಗಾರರಿದ್ದ ಬಸ್ನ ಮೇಲೆ ದಾಳಿ ನಡೆದ ನಂತರ ಐಸಿಸಿ ನಿನ್ನೆ ಕರೆದಿದ್ದ ವಿಶೇಷ ಸಭೆಯಲ್ಲಿ ವಿಶ್ವಕಪ್ ನಲ್ಲಿ ಎಲ್ಲ ತಂಡಗಳ ವಿರುದ್ಧವು ಜಿದ್ದಾಜಿದ್ದಿ ಮಾಡುವುದಾಗಿ ಸಹಿ ಹಾಕಲಾಗಿದ್ದು, ಇದರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಗ್ರೀನ್ ಸಿಗ್ನಲ್ ದೊರೆತಿದೆ.