ಮರಗಳಿಗೆ ವಿಷದ ಚುಚ್ಚುಮದ್ದು ನೀಡಿದ ವೈದ್ಯ

ಮರಗಳಿಗೆ ವಿಷದ ಚುಚ್ಚುಮದ್ದು ನೀಡಿದ ವೈದ್ಯ

ಬೆಂಗಳೂರು, ನ. 6 : ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಹಸಿರಾಗಿಸುವ ಮರಕ್ಕೆ ವಿಷಪ್ರಾಶನ ಮಾಡಿದ್ದಾನೆ. ಪ್ರಕೃತಿಗೆ ಅಳಿವಿಗೆ ಕಾರಣನಾಗಿದ್ದಾನೆ. ಮರ ಬೆಳೆಸಿ ಪರಿಸರ ಉಳಿಸಿ ಎಂಬ ಘೋಷಣೆ ಎಲ್ಲೆಡೆ ಆರಂಭವಾಗಿರುವ ಬೆನ್ನಲ್ಲೇ ಇಲ್ಲೊಬ್ಬ ಪುಣ್ಯಾತ್ಮ ಆಮ್ಲಜನಕ ಬಿಡುಗಡೆ ಮಾಡುವ ಐದು ಮರಗಳಿಗೆ ವಿಷದ ಇಂಜೆಕ್ಷನ್ ನೀಡಿ ಸಾಯುವಂತೆ ಮಾಡಿದ್ದಾನೆ.
ರಾಜರಾಜೇಶ್ವರಿ ನಗರದ ಪಂಚಶೀಲ ನಗರ ನಿವಾಸಿ ನರೇಂದ್ರ ವೈದ್ಯ. ವಿಷಪ್ರಾಶನ ಇಂಜೆಕ್ಷನ್ ಮರಗಳಿಗೆ ನೀಡಿ ಕಲಷಿತ ವಾತಾವರಣ ಮಾಡಲು ಹೊರಟ್ಟಿದ್ದಾನೆ. ಪಂಚಶೀಲ ಬ್ಲಾಕ್ನಲ್ಲಿ ನರೇಂದ್ರ ಕಟ್ಟಡವೊಂದನ್ನು ನಿರ್ಮಿಸಿದ್ದು, ಕಟ್ಟಡದ ಎದುರಿಗಿದ್ದ ಬೃಹದಾಕಾರ ಬೆಳೆದುನಿಂತಿದ್ದ ಮರಗಳಿಗೆ ನರೇಂದ್ರ ರಾತ್ರೋರಾತ್ರಿ ವಿಷದ ಇಂಜೆಕ್ಷನ್ ನೀಡಿ ಬೀಳುವಂತೆ ಮಾಡಿದ್ದಾನೆ ಎಂದು ಸಂಘದ ಪದಾಧಿಕಾರಿಗಳು ಬಿಬಿಎಂಪಿ ಅರಣ್ಯ ಘಟಕಕ್ಕೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮರಗಳಿಗೆ ವಿಷದ ಇಂಜೆಕ್ಷನ್ ನೀಡಿರುವುದು ಪತ್ತೆಯಾಗಿದೆ. ಕಟ್ಟಡದ ಮುಂಭಾಗ ಇರುವ ಮರಗಳಿಂದ ನಮಗೆ ಅಲರ್ಜಿಯಾಗುತ್ತಿತ್ತು ಎಂದು ನರೇಂದ್ರ ಉಡಾಫೆ ಉತ್ತರ ನೀಡುತ್ತಿದ್ದಾನೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos