ಹಾಸನ, ನ.15 : ಯಡಿಯೂರಪ್ಪ ಜನರನ್ನು ಬ್ರೈನ್ವಾಷ್ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರೆಲ್ಲರನ್ನೂ ಮಂತ್ರಿ ಮಾಡುವುದಾಗಿ ಹೇಳಿದರು. ಜನರ ಬ್ರೈನ್ವಾಷ್ ದುರುದ್ದೇಶವಾಗಿದೆ ಎಂದು ಕಿಡಿಕಾರಿದರು. ಯಡಿಯೂರಪ್ಪ ಅವರು ಬಿಜೆಪಿ ಸೇರಿದ 15 ಮಂದಿ ಅನರ್ಹ ಶಾಸಕರನ್ನೂ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ.