ವಿಪ್ ಜಾರಿ ಮಾಡಲು ಅಜಿತ್ ಗೆ ಹಕ್ಕಿಲ್ಲ

ವಿಪ್ ಜಾರಿ ಮಾಡಲು ಅಜಿತ್ ಗೆ ಹಕ್ಕಿಲ್ಲ

ಮುಂಬಯಿ, ನ. 26 : ವಿಪ್ ಜಾರಿ ಮಾಡಲು ಅಜಿತ್ ಗೆ ಹಕ್ಕಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಪಂಚಾತಾರಾ ಹೋಟೆಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಮಹಾರಾಷ್ಟ್ರ ವಿಧಾನಸಭೆ ಬಹುಮತ ಸಾಬೀತು ವೇಳೆ ಬಿಜೆಪಿ ವಿರುದ್ಧ ಮತ ಚಲಾಯಿಸಿದರೇ ಯಾವುದೇ ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳುವುದಿಲ್ಲ ಎಂದರು. ಮುಂಬಯಿಯ ಶಾಸಕಾಂಗ ಪಕ್ಷದ ನಾಯಕನಾಗಿರುವ ಅಜಿತ್ ಪವಾರ್ ವಿಪ್ ಜಾರಿ ಮಾಡಿದ್ದು, ಉಲ್ಲಂಘಿಸಿದರೇ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಈ ಸಂಬಂಧವಾಗಿ ನಾನು ಹಲವು ಕಾನೂನು ಪಂಡಿತರನ್ನು ಭೇಟಿ ಮಾಡಿದ್ದೇನೆ, ಆ ರೀತಿಯಾಗಲು ಸಾಧ್ಯವಿಲ್ಲ, ಏಕೆಂದರೆ ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಅವರನ್ನು ತೆಗೆದು ಹಾಕಿರುವುದಾಗಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos