ಹಾವೇರಿ, ಅ. 24: ಎತ್ತಿನ ಮೈ ತೊಳೆಯಲು ಮಾವನ ಜೊತೆ ಹೋಗಿದ್ದ ಪ್ರಶಾಂತ್ ಕಾಲುಜಾರಿ ವರದಾ ನದಿಯಲ್ಲಿ ಮುಳುಗಿದ್ದಾರೆ. ಇದನ್ನು ಕಂಡು ಅಲ್ಲೆ ಸ್ನಾನ ಮಾಡುತ್ತಿದ್ದ ವೃದ್ಧನೋರ್ವ ಪ್ರಶಾಂತ್ನನ್ನು ರಕ್ಷಿಸಲು ಮುಂದಾಗಿದ್ದರು. ನೀರಿನ ರಭಸ ಹೆಚ್ಚಾಗಿದ್ದರಿಂದ ಇಬ್ಬರೂ ಕೂಡ ನೀರಿನ ಸೆಳೆತದಿಂದ ಕೊಚ್ಚಿಹೋಗಿದ್ದಾರೆ.
ಪ್ರಶಾಂತ ಸೋಮಪ್ಪ ಕೊಂಚಿಗೇರಿ ಮತ್ತು ಪರಮೇಶಪ್ಪ ಕಮ್ಮಾರ ನೀರುಪಾಲಾದ ದುರ್ದೈವಿಗಳು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.