ಬೆಂಗಳೂರು, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ರಾಯಚೂರಿನ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೀರಿಲ್ಲದೇ ಪರಿತಪಿಸುತ್ತಿರುವ ಜನರ ನೀರಿನ ಬವಣೆ ನೀಗಿಸಲು ಯಶ್ ಫೌಂಡೇಷನ್ ಮುಂದಾಗಿದೆ.
ಯಶ್ ತಮ್ಮ ನಟನೆ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಯಶೋಮಾರ್ಗ ಸಂಘಟನೆ ಮೂಲಕ ಕೆರೆಗಳ ಹೂಳೆತ್ತುವ ಕೆಲಸ, ನೀರು ಪೂರೈಕೆಯಂತಹ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಈ ವರ್ಷವೂ, ಗ್ರಾಮೀಣ ಭಾಗದಲ್ಲಿ ನೀರಿನ ಬವಣೆ ಇದ್ದು, ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸ ಮಾಡುತ್ತಿದ್ದಾರೆ.