ಕೆ.ಆರ್.ಪುರ, ಅ. 5: ರಾತ್ರಿ ಸುರಿದ ದಾರಾಕಾರ ಮಳೆಯಿಂದ ವಿಜನಾಪುರ ವಾರ್ಡಿನ ಅಂಬೇಡ್ಕರ್ ನಗರ, ಸೇರಿದಂತೆ ಹಲವು ಭಾಗಗಳಲ್ಲಿ ಬಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಪ್ರತಿ ಮಳೆಗೂ ಈ ರೀತಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಮಳೆ ಬಂದ ಆ ದಿನ ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಈ ಬಗ್ಗೆ ಹಲವಾರು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೆ ಪ್ರಯೋಜನವಾಗುತ್ತಿಲ್ಲ ಎಂದು ಸಿಪಿಐ(ಎಂ) ಸದಸ್ಯೆ ಆರೋಪಿಸಿದರು.
ಇನ್ನೂ ದೇವಸಂದ್ರ
, ಬಸವನಪುರ ವಾರ್ಡ್ ಗಳಲ್ಲಿ ಒಳ ಚರಂಡಿ ಮತ್ತು ಮೋರಿ ನೀರು ಉಕ್ಕಿ ರಸ್ತೆಗೆ ಬರುತ್ತಿದೆ.
ಸ್ಥಳಿಯ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ, ಸಾಮನ್ಯ ಜನರು ಮಳೆ ಬಂದ ದಿನ ಮನೆಗಳಿಗೆ ನೀರುನುಗ್ಗಿದ ಪರಿಣಾಮ ಊಟ ಇಲ್ಲದೆ ಉಪ
ವಾಸ ದಿಂದ ರಾತ್ರಿ ಇಡೀ ಜಾಗರಣೆ ಮಾಡಬೇಕಾಗಿದೆ ಎಂದು ದೂರಿದರು.