ವೃದ್ದ ದಂಪತಿಗಳ ಶೌರ್ಯಕ್ಕೆ 2 ಲಕ್ಷ

ವೃದ್ದ ದಂಪತಿಗಳ ಶೌರ್ಯಕ್ಕೆ 2 ಲಕ್ಷ

ಚೆನ್ನೈ, ಆ. 16 : ತಮಿಳು ನಾಡಿನ ವೃದ್ದ ದಂಪತಿಯ ದೈರ್ಯ ಮೆಚ್ಚಿ ಸಿಎಂಕೆ ಪಳನಿಸ್ವಾಮಿ 2 ಲಕ್ಷರೂ ಬಹುಮಾನ ನೀಡಿ ಗೌರವಿಸಿದ್ದಾರೆ.
ಆ.11ರ ರಾತ್ರಿ ತಿರುನೆಲ್ವೇಲಿ ಜಿಲ್ಲೆಯ ಕಡಯಮ್ ಗ್ರಾಮದಲ್ಲಿ ಇಬ್ಬರು ದರೋಡೆಕೋರರು ಪಿ. ಷನ್ಮುಗವೇಲು ಮತ್ತು ಸೆಂಥಾಮರೈ ದಂಪತಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಪ್ರತಿಯಾಗಿ ಪತಿಯ ನೆರವಿಗೆ ಸೆಂಥಾಮರೈ ಆಗಮಿಸಿ ದರೋಡೆಕೋರರ ಮೇಲೆ ದಾಳಿದ ದಂಪತಿಗಳು ಚೇರ್ ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಬಳಸಿ ದರೋಡೆಕೋರರ ಮೇಲೆ ದಾಳಿ ನಡೆಸಿದ ಹಿನ್ನಲೆ ವಿರುದ್ಧ ಹೋರಾಡಲಾಗದೆ ದರೋಡೆಕೋರರು ಪರಾರಿಯಾಗಿದ್ದರು. ದಂಪತಿಯ ಶೌರ್ಯವನ್ನು ಮೆಚ್ಚಿದ ತಮಿಳುನಾಡು ಸಿಎಂ ಪಳನಿಸ್ವಾಮಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 2 ಲಕ್ಷ ರೂ. ನಗದು ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos