ಸೆ. 5 : ಶಿಕ್ಷಕನ ವಿದ್ಯಾರ್ಥಿಗಳು, ತನ್ನ ಶಿಕ್ಷಕನನ್ನು ಮೆಚ್ಚಿದರೆ, ಗುರುವಿನ ಶಿಷ್ಯರು ತನ್ನ ಗುರುವನ್ನು ವಿರೋಧಿಸುತ್ತಾರೆ, ಕೊಲೆ ಮಾಡುವ ಹಂತಕ್ಕೂ ಹೋಗುತ್ತಾರೆ. ವಿಶ್ವ ಗುರು ಬಸವಣ್ಣನನ್ನು ಕೊಂದಂತೆ. ಪ್ರಶ್ನಿಸುತ್ತಲೇ ಯುವಜನಾಂಗವನ್ನು ಅರಿವಿನಂಗಳಕ್ಕೆ ತರುತ್ತಿದ್ದ ಸಾಕ್ರೆಟಿಸಗೆ ವಿಷ ಕುಡಿಸಿದಂತೆ. ವಿಶ್ವಮಾನವತ್ವವನ್ನು ಪ್ರತಿಪಾದಿಸಿದ ಗಾಂಧಿಗೆ ಗುಂಡಿಕ್ಕಿದಂತೆ. ಇವು ಕೆಲವೇ ಉದಾಹರಣೆಗಳಷ್ಟೇ.ಏಕೆಂದರೆ ಇವರೆಲ್ಲ, ಕನಿಷ್ಠಮಾನವರನ್ನು ವಿಶ್ವಮಾನವರನ್ನಾಗಿ ಮಾಡಲು ಪ್ರಯತ್ನಿಸಿದ ಧೀರ ಗುರುಗಳು.ಇವರುಗಳು ಸಾಲಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಕೂಡ ಚಿರಂಜೀವಿ ಯಾಗಿದ್ದಾರೆ. ಇಂತಹವರ ಸಾಲಿನಲ್ಲಿ ಸೇರಲು ಪ್ರಯತ್ನಿಸುತ್ತಿರುವ ಗುರುಗಳಿಗೆ ಮಾತ್ರ ” ಶಿಕ್ಷಕರ ದಿನಾಚರಣೆ ಶುಭಾಶಯಗಳು”