ವಿಜಯಪುರ,ಆ.10 : ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಭೀಕರ ಪ್ರವಾಹದ ಭೀತಿ ಎದುರಾಗಿದ್ದು, ರಾಜ್ಯದಲ್ಲಿ ರಣಭೀಕರ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಗ್ರಾಮಗಳು ಮುಳುಗಿದ್ದು, ವಿವಿಧೆಡೆ ಸಂಪರ್ಕ ಸ್ಥಗಿತವಾಗಿದೆ. ವಿಜಯಪುರ, ಬಾಗಲಕೋಟೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಹಾರಾಷ್ಟ್ರದಿಂದ ಸತತವಾಗಿ ಹರಿದುಬರುತ್ತಿರುವ ನೀರಿನಿಂದ ಬಾಗಲಕೋಟ, ವಿಜಯಪುರ,ನೆರೆಹಾವಳಿಯ ಭೀತಿ ಎದುರಾಗಿದೆ. ವಿಜಯಪುರದಲ್ಲಿ ಭೀಕರ ಪ್ರವಾಹ ಹಿನ್ನಲೆ ರಸ್ತೆಗಳು ಕೊಚ್ಚಿ ಹೋಗಿವೆ. 12 ಜಿಲ್ಲೆಗಳು 51 ತಾಲೂಕಗಳಲ್ಲಿ ವರುಣಾಘಾತದಿಂದ ನೂರಾರು ಗ್ರಾಮಗಳ ಜಲಾವೃತದಿಂದ ರಸ್ತೆಗಳು ಕೊಚ್ಚಿಹೋಗಿವೆ.ಈವರೆಗೆ 18 ಸಾವು, ಸಾವಿರಾರು ಕುಟುಂಬ ಅತಂತ್ರ ಹೆದ್ದಾರಿ ಬಂದ್ ಹಿನ್ನಲೆ ಪ್ರಯಾಣಿಕರು ಪರದಾಟವಂತ ಪರಿಸ್ಥಿತಿ ಇದೆ